ಹುತಾತ್ಮನಾದ ಯೋಧ ಔರಂಗಜೇಬ್ ಮನೆಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಜಮ್ಮು, ಜೂ.20-ಉಗ್ರರಿಂದ ಅಪಹರಿಸಲ್ಟಟ್ಟು ಚಿತ್ರಹಿಂಸೆಗೆ ಗುರಿಯಾಗಿ ಹುತಾತ್ಮನಾದ ಯೋಧ ಔರಂಗಜೇಬ್ ಮನೆಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಹಿರಿಯ ಸೇನಾಧಿಕಾರಿಗಳೊಂದಿಗೆ ಪೂಂಚ್ ಜಿಲ್ಲೆಯ ಗಡಿ ಭಾಗದಲ್ಲಿರುವ ಸಲಾನಿ ಕುಗ್ರಾಮದ ಹುತಾತ್ಮ ಯೋಧನ ಮನೆಗೆ ತೆರಳಿದ ಅವರು, ಉಗ್ರರ ಕೃತ್ಯವನ್ನು ಖಂಡಿಸಿದರು. ಹುತಾತ್ಮ ಯೋಧನ ಗುಣಗಾನ ಮಾಡಿದರು. ಔರಂಗಜೇಬ್ ದೇಶಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದ ಸಚಿವರು ಕುಟಂಬದವರನ್ನು ಸಮಾಧಾನಪಡಿಸಿದರು. 44ನೇ ರಾಷ್ಟ್ರೀಯ ರೈಫಲ್ಸ್‍ನಲ್ಲಿ ರೈಫಲ್ ಮ್ಯಾನ್ ಆಗಿದ್ದ ಔರಂಗಜೇಬ್‍ನನ್ನು ರಂಜಾನ್‍ಗೆ ಎರಡು ದಿನಗಳ ಮೊದಲು ಶಂಕಿತ ಹಿಜ್‍ಬುಲ್ ಉಗ್ರರು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ