ಹತ್ತು ಸಾವಿರಕ್ಕೆ ಜೋಡಿ ಕೊಲೆ

ಹುಬ್ಬಳ್ಳಿ- ನಗರವನ್ನು ಬೆಚ್ಚಿಬಿಳಿಸಿದ ಅವಳಿ ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಶಹರಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಜೆಪಿ ನಗರದ ಅಜಂತ ಹೋಟೆಲ್ ಬಳಿ ಜೂನ್ 8 ರ ಮಧ್ಯರಾತ್ರಿ ನಡದಿದ್ದ ಜೋಡಿ ಕೊಲೆಯ ಆರೋಪಿಗಳನ್ನ ಬಂಧಿಸುವಲ್ಲಿ ಶಹರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂದು ಹು-ಧಾ ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೋಹಸಿನ್ ನವಲೂರು(25) ಅಖಿಲ್ ಬೇಪಾರಿ(23) ಇರ್ಷಾದ್ ಮಿಶ್ರಿಕೋಟಿ(26) ಹಾಗೂ ಕೊಲೆಗೆ ಸಹಾಯ ಮಾಡಿದ ವಿರೇಶ್ ಸೊಟ್ನಾಳ(27) ಬಂಧಿತ ಆರೋಪಿಗಳು. ಇವರು ಕೇವಲ ಹತ್ತು ಸಾವಿರ ಹಣಕ್ಕಾಗಿ ಕೊಲೆ‌ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೃತ ಫೈರೋಜ್ ಹನಸಿ ಎಂಬಾತ ಆರೋಪಿ ಇರ್ಷಾದ್ ಮಿಶ್ರಕೋಟಿಗೆ ಹತ್ತು ಸಾವಿರ ಹಣ ನೀಡಿದ್ದ. ಆದರೆ ಹಣ ವಾಪಸ್ಸು ಕೊಡುವಂತೆ ಕೇಳಿದ್ದಕ್ಕೆ, ಇರ್ಷಾದ್ ಹಾಗೂ ಆತನ‌ ಮೂವರು ಸ್ನೇಹಿತರು ಸೇರಿ ಫೈರೋಜ್ ಹಾಗೂ ರಿಯಾಜ್ ಕೊಲೆ ಮಾಡಿದ್ದಾರೆ. ಇವರ ಮಧ್ಯೆ ಮೊದಲಿನಿಂದಲೂ ಹಳೇ ವೈಷಮ್ಯ ಇತ್ತು. ಪ್ರೇಮ ಪ್ರಕರಣ ಕೂಡ ಕೇಳಿ ಬರುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ