ಏರ್‍ಪೆÇೀರ್ಟ್‍ನಿಂದ ಬಸ್‍ನಲ್ಲಿ ಬಂದಿಳಿದು ಮನೆಗೆ ನಡೆದು ಹೋಗುತ್ತಿದ್ದ ವ್ಯಕ್ತಿಯ ಅಡ್ಡಗಟ್ಟಿ ದುಬಾರಿ ಬೆಲೆಯ ಮೊಬೈಲ್‍ನ್ನು ದರೋಡೆಕೋರರು ಕಿತ್ತುಕೊಂಡು ಪರಾರಿ

 

ಬೆಂಗಳೂರು, ಜೂ.11-ಏರ್‍ಪೆÇೀರ್ಟ್‍ನಿಂದ ಬಸ್‍ನಲ್ಲಿ ಬಂದಿಳಿದು ಮನೆಗೆ ನಡೆದು ಹೋಗುತ್ತಿದ್ದ ವ್ಯಕ್ತಿಯ ಅಡ್ಡಗಟ್ಟಿ ದುಬಾರಿ ಬೆಲೆಯ ಮೊಬೈಲ್‍ನ್ನು ದರೋಡೆಕೋರರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಜಾಜಿನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಾಜಿನಗರದ 3ನೇ ಬ್ಲಾಕ್, 16ನೇ ಮುಖ್ಯರಸ್ತೆ ನಿವಾಸಿ ಸಂಜಯ್ ಎಂಬುವರು ನಿನ್ನೆ ಮುಂಜಾನೆ ಏರ್‍ಪೆÇೀರ್ಟ್‍ನಿಂದ ವೆಸ್ಟ್ ಆಫ್ ಕಾರ್ಡ್ ರೋಡ್‍ಗೆ ಬಂದು ಬಸ್ಸಿಳಿದು ಮನೆಗೆ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರ ಪೈಕಿ ಒಬ್ಬಾತ ಕಾರಿನಿಂದಿಳಿದು ಸಂಜಯ್ ಕೈಯಲ್ಲಿದ್ದ ದುಬಾರಿ ಬೆಲೆಯ ಮೊಬೈಲ್ ಕಿತ್ತುಕೊಂಡು ಕಾರು ಹತ್ತಿ ಪರಾರಿಯಾಗಿದ್ದಾನೆ.
ಈ ಸಂಬಂಧ ರಾಜಾಜಿನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ