ವಿಧ್ವಂಸಕ ಕೃತ್ಯ ಯತ್ನ ವಿಫಲ : 5 ಉಗ್ರರು ಖತಂ

ಶ್ರೀನಗರ, ಜೂ.10-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ಒಳನುಸುಳುವಿಕೆ ಯತ್ನಗಳು ಮುಂದುವರಿದಿವೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಭಯೋತ್ಪಾದಕರ ಸಂಚನ್ನು ಇಂದು ವಿಫಲಗೊಳಿಸಿರುವ ಸೇನೆ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಕುಪ್ವಾರ ಜಿಲ್ಲೆಯ ಕರೇನ್ ಸೆಕ್ಟೆರ್‍ನ ಎಲ್‍ಒಸಿ ಬಳಿ ಈ ಘಟನೆ ನಡೆದಿದೆ ರಕ್ಷಣಾ ವಕ್ತಾರರು ತಿಳಿಸಿದ್ಧಾರೆ.
ಎಲ್‍ಒಸಿ ಬಳಿ ಉಗ್ರರ ಗುಂಪೆÇಂದು ಓಡಾಗುತ್ತಿರುವುದನ್ನು ಗಮನಿಸಿ ಕಾರ್ಯಾಚರಣೆಗೆ ನಡೆಸಿದ ಯೋಧರು ಮೂವರು ಭಯೋತ್ಪಾದಕರನ್ನು ಕೊಂದು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸ್ಥಳದಲ್ಲಿ ಇರಬಹುದಾದ ಮತ್ತಷ್ಟು ಉಗ್ರರಿಗಾಗಿ ಮಾನವ ಬೇಟೆ ಮುಂದುವರಿದಿದೆ.
ರಂಜಾನ್ ಕದನವಿರಾಮದ ದುರ್ಲಾಭ ಪಡೆದು ದೇಶದೊಳಗೆ ನುಸುಳಿ ವಿಧ್ವಂಸಕ ಕೃತ್ಯ ಎಸಗುವ ಉಗ್ರರ ಪ್ರಯತ್ನವನ್ನು ವಿಫಲಗೊಳಿಸುತ್ತಿರುವ ಭದ್ರತಾ ಪಡೆಗಳ ಹೊಸ ಕಾರ್ಯಾಚರಣೆ ಇದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ