ಲಾರಿಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವು

 

ಬೆಂಗಳೂರು, ಜೂ.6-ವೇಗವಾಗಿ ಮುನ್ನುಗ್ಗಿದ ಲಾರಿಯೊಂದು ಬೈಕ್‍ಗೆಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವಘಟನೆ ಕೆ.ಆರ್.ಪುರ ಸಂಚಾರಿ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿಇಂದು ಬೆಳಗ್ಗೆ ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರನನ್ನು ಬೆಳಗಾವಿ ಮೂಲದರಮೀಜ್ (31) ಎಂದುಗುರುತಿಸಲಾಗಿದೆ.

ಫ್ರೇಜರ್‍ಟೌನ್‍ನಲ್ಲಿ ವಾಸವಾಗಿದ್ದರಮೀಜ್‍ಇಂದು ಬೆಳಗ್ಗೆ 7 ಗಂಟೆಯಲ್ಲಿ ಎಂದಿನಂತೆ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.
ಐಟಿಪಿಎಲ್‍ರಸ್ತೆ, ಹೂಡಿ ಬಳಿಯ ಎಬಿಬಿ ಕಂಪೆನಿ ಸಮೀಪ ಅತಿವೇಗವಾಗಿ ಮುನ್ನುಗ್ಗಿದ ಲಾರಿಯೊಂದುರಮೀಜ್ ಬೈಕ್‍ಗೆಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದರಭಸಕ್ಕೆರಮೀಜ್ ಕೆಳಗೆ ಬಿದ್ದಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾನೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕೆ.ಆರ್.ಪುರ ಸಂಚಾರಿಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ