ಸಿಬಿಐ ದಾಳಿ‌ ಹಿಂದೆ ಬಿಜೆಪಿ ಕುತಂತ್ರ: ಪರಿಷತ್ ಸದಸ್ಯ ಲಿಂಗಪ್ಪ ಆರೋಪ

ರಾಮನಗರ,ಮೇ 31

ಡಿ.ಕೆ‌‌.ಶಿವಕುಮಾರ್ ಆಪ್ತರ ಮೇಲೆ ಸಿಬಿಐ ಸರ್ಚ್ ವಾರೆಂಟ್ ಪಡೆದಿರುವುದರ ಹಿಂದೆ ಬಿಜೆಪಿ ನಾಯಕ‌ರ ಕುತಂತ್ರ ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಸಿಟ್ಟಾಗಿ ಡಿಕೆಎಸ್ ಸಹೋದರರ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣ‌ ಮಾಡುತ್ತಿದೆ.‌ ಈ ಪ್ರಜಾಪ್ರಭುತ್ವ ವಿರೋಧಿ ನಡೆ ವಿರೋಧಿಸಿ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು‌ ಬೀದಿಗೆ ಇಳಿದು ಹೋರಾಟ ನಡೆಸುತ್ತೇವೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ