ಬಾಣಂತನ ಮುಗಿಸಿಕೊಂಡು ಗಂಡನ ಬಂದಿದ್ದ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ

ಮೈಸೂರು, ಮೇ 29-ತವರು ಮನೆಯಲ್ಲಿ ಬಾಣಂತನ ಮುಗಿಸಿಕೊಂಡು ಗಂಡನ ಬಂದಿದ್ದ ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೈಸೂರು ತಾಲೂಕಿನ ಶಟ್ಟನಾಯಕನಹಳ್ಳಿ ನಿವಾಸಿ ಕಾವ್ಯ (24) ಸಾವನ್ನಪ್ಪಿರುವ ಗೃಹಿಣಿ.
ತಾಲೂಕಿನ ಬ್ಯಾತನಹಳ್ಳಿಯ ಮಹೇಶ್ ಎಂಬಾತನೊಂದಿಗೆ ಮೂರು ವರ್ಷದ ಹಿಂದೆ ಕಾವ್ಯಳ ವಿವಾಹವಾಗಿತ್ತು. ಇತ್ತೀಚೆಗಷ್ಟೆ ಬಾಣಂತನಕ್ಕಾಗಿ ತವರಿಗೆ ಹೋಗಿದ್ದ ಕಾವ್ಯ ಮೂರು ದಿನಗಳ ಹಿಂದೆಯಷ್ಟೆ ಗಂಡನ ಮನೆಗೆ ವಾಪಸಾಗಿದ್ದರು.
ಈ ನಡುವೆ ಕಾವ್ಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಷಯ ತಿಳಿದ ಪೆÇೀಷಕರು ತಕ್ಷಣ ಸ್ಥಳಕ್ಕೆ ದಾವಿಸಿ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.
ತಮ್ಮ ಮಗಳನ್ನು ಆಕೆಯ ಗಂಡ ಮಹೇಶ್ ಹಾಗೂ ಅತ್ತೆ-ಮಾವ ಹೊಡೆದು ಕೊಲೆ ಮಾಡಿ ನಂತರ ನೇಣು ಬಿಗಿದು ಎಲ್ಲರೂ ತಲೆಮರೆಸಿಕೊಂಡಿದ್ದಾರೆಂದು ಆರೋಪಿಸಿ ಕಡಕೋಳ ಪೆÇಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ನಾಪತ್ತೆಯಾಗಿರುವ ಮಹೇಶ್ ಹಾಗೂ ಆತನ ತಂದೆ-ತಾಯಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ