ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಕಡೆ ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡಿ ಪರಾರಿ

 

ಬೆಂಗಳೂರು, ಮೇ 27-ಸರಗಳ್ಳರ ಹಾವಳಿ ಮಿತಿಮೀರಿದ್ದ ನಗರದಲ್ಲಿ ಇದೀಗ ಮೊಬೈಲ್ ಕಳ್ಳರ ಕಾಟ ಹೆಚ್ಚಾಗಿದೆ.
ನಿನ್ನೆ ರಾತ್ರಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಕಡೆ ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯ: ನಿನ್ನೆ ರಾತ್ರಿ 8.45ರ ಸಮಯದಲ್ಲಿ ವರುಣ್ ಎಂಬಾತ ಸುಮನಹಳ್ಳಿ ವೃತ್ತದಲ್ಲಿ ಕ್ಯಾಬ್‍ಗೆ ಕಾಯುತ್ತಿದ್ದಾಗ ಮೋಟಾರ್‍ಬೈಕ್‍ನಲ್ಲಿ ಬಂದ ಇಬ್ಬರು ಕಳ್ಳರು ಆತನನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತಂತೆ ವರುಣ್ ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾರೆ.
ವಿಜಯನಗರ: ನಿನ್ನೆ ರಾತ್ರಿ ಸುಮಾರು 8.50ರ ಸುಮಾರಿಗೆ ವಿಜಯನಗರದ ವಾಟರ್‍ಟ್ಯಾಂಕ್ ಸಮೀಪ ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಬಸವರಾಜ್ ಎಂಬುವವರ ಮೊಬೈಲ್‍ಅನ್ನು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದು, ವಿಜಯನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವೇಶ್ವರನಗರ: ಅದೇ ರೀತಿ ಬಸವೇಶ್ವರನಗರದ ನೇತಾಜಿ ರಸ್ತೆಯಲ್ಲಿ ರಾತ್ರಿ 8.15ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ನವನೀತ್ ಎಂಬುವವರ ಮೊಬೈಲ್‍ಅನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿ ಪರಾರಿಯಾಗಿದ್ದು, ಬಸವೇಶ್ವರನಗರ ಠಾಣೆಗೆ ದೂರು ನೀಡಲಾಗಿದೆ.
ರಾತ್ರಿ 8.15 ರಿಂದ 8.45ರ ವೇಳೆಗೆ ಮೂರೂ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮೊಬೈಲ್ ಅಪಹರಣ ಪ್ರಕರಣ ನಡೆದಿರುವುದರಿಂದ ಒಂದೇ ತಂಡದ ಸದಸ್ಯರು ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೆÇಲೀಸರು ಮೊಬೈಲ್ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ