ಅಗ್ನಿ ಆಕಸ್ಮಿಕಕ್ಕೆ ಐವತ್ತಕ್ಕೂ ಹೆಚ್ಚು ತೆಂಗಿನ ಮರಗಳು ಭಸ್ಮ

ತುರುವೇಕೆರೆ,ಮೇ 27- ಅಗ್ನಿ ಆಕಸ್ಮಿಕಕ್ಕೆ ಐವತ್ತಕ್ಕೂ ಹೆಚ್ಚು ತೆಂಗಿನ ಮರಗಳು ಭಸ್ಮಗೊಂಡಿರುವ ಘಟನೆ ನಡೆದಿದೆ. ದುಂಡ ಮಜರೆ ಲಕ್ಕಸಂದ್ರ ಗ್ರಾಮದ ಸುರೇಶ್ ಎಂಬುವವರ ತೋಟದಲ್ಲಿ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ ಪಕ್ಕದ ಪರಮೇಶ್ವರಯ್ಯ ಎಂಬುವರ ತೋಟಕ್ಕೂ ಆವರಿಸಿ ತೆಂಗಿನ ಸೋಗೆಗೆ ಬೆಂಕಿ ಹತ್ತಿಕೊಂದ್ದರಿಂದ ತೆಂಗಿನ ಮರಗಳು ಸಂಪೂರ್ಣ ಸುಟ್ಟು ಹೋಗಿವೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಆ ವೇಳೆಗಾಗಲೇ ಐವತ್ತಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗೆ ಆಹುತಿಯಾಗಿದ್ದವು.
ತೋಟದ ಮಾಲೀಕ ಪರಮೇಶ್ವರಯ್ಯ ಮಾತನಾಡಿ, ಲP್ಷÁಂತರ ಮೌಲ್ಯದ 50ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗೆ ಸುಟ್ಟು ಹೋಗಿವೆ. ನಮ್ಮ ಜೀವನಾದಾರವೇ ಈ ತೋಟವಾಗಿದ್ದು ತಮ್ಮ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ತಮಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ