ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಹತ್ಯೆ

ರಾಂಚಿ, ಮೇ 21- ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರ್ಖಂಡ್‍ನಿಂದ ದೆಹಲಿಗೆ ಕರೆ ತಂದಿದ್ದ ತಂಡವೊಂದು ಆಕೆ ತನ್ನ ಸಂಬಳ ಕೇಳಿದ್ದರಿಂದ ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚರಂಡಿಯಲ್ಲಿ ಎಸೆದಿರುವ ಬರ್ಬರ ಘಟನೆ ನಡೆದಿದೆ.
ಮಂಜೀತ್ ಎಂಬಾತ ಈ ಬಾಲಕಿಯನ್ನು ಮೂರು ವರ್ಷಗಳ ಹಿಂದೆ ದೆಹಲಿಗೆ ಕರೆದುಕೊಂಡು ಬಂದಿದ್ದ. ಮನೆಯೊಂದರಲ್ಲಿ ಮನೆಗೆಲಸಕ್ಕೆ ನೇಮಿಸಿದ್ದ. ಮನೆ ಮಾಲೀಕರಿಂದ ಬಾಲಕಿಯ ಸಂಬಳ ಪಡೆದುಕೊಳ್ಳುತ್ತಿದ್ದ ಮಂಜೀತ್ ಕಳೆದ ಒಂದು ವರ್ಷದಿಂದ ಆಕೆಗೆ ಸಂಬಳ ನೀಡಿರಲಿಲ್ಲ ಎಂದು ಹೇಳಲಾಗಿದೆ.
ಮೇ 3ರಂದು ಮಂಜೀತ್ ನಿವಾಸಕ್ಕೆ ಭೇಟಿ ನೀಡಿದ ಬಾಲಕಿ ಸಂಬಳಕ್ಕಾಗಿ ಆಗ್ರಹಿಸಿದ ವೇಳೆ, ತನ್ನ ಸಹವರ್ತಿ ಮಹಿಳೆ ಸೇರಿದಂತೆ ಮತ್ತಿಬ್ಬರ ಸಹಕಾರದೊಂದಿಗೆ ಆಕೆಯ ಹತ್ಯೆ ಮಾಡಿದ್ದಾನೆ. ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮಿಯಾನ್ವಾಲಿ ನಗರದ ಚರಂಡಿಯಲ್ಲಿ ಎಸೆದಿದ್ದಾರೆ.
ಬಾಲಕಿಯ ಮೃತದೇಹ ಮೇ 4ರಂದು ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದರು. ಅಕ್ಕಪಕ್ಕದ ನಿವಾಸಿಗಳ ಮೇಲೆ ನಿಗಾ ವಹಿಸಿದ ವೇಳೆÉ ಮಂಜೀತ್, ಬಾಲಕಿಯ ಮೃತದೇಹ ಪತ್ತೆಯಾದ ದಿನದಿಂದ ನಾಪತ್ತೆಯಾಗಿರುವುದು ತಿಳಿದು ಬಂದಿತ್ತು.
ಮೇ 17 ರಂದು ಮಂಜೀತ್‍ನನ್ನು ವಶಕ್ಕೆ ಪಡೆದಿದ್ದ ಪೆÇಲೀಸರು ವಿಚಾರಣೆ ನಡೆಸಿದ ವೇಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿರುವ ಪೆÇಲೀಸರು ಹತ್ಯೆಯಲ್ಲಿ ಪಾಲ್ಗೊಂಡಿದ್ದ ಮೂವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ