ವಿಶ್ವಾಸಮತ ಸೋಲಿನ ಪರಾಮರ್ಶೆ ಕುರಿತು ಬಿಜೆಪಿ ಸಭೆ: ಸೋತ ಅಭ್ಯರ್ಥಿಗಳ ಜತೆಯೂ 23ರಂದು ಮಾಜಿ ಸಿಎಂ ಬಿಎಸ್ ವೈ ಸಭೆ

ಬೆಂಗಳೂರು:ಮೇ-20: ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಜೊತೆ ಮೇ 23ರಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.

ಇಂದು ಬಿಜೆಪಿ ಕಚೇರಿಯಲ್ಲಿ ವಿಶ್ವಾಸಮತ ಸೋಲಿನ ಪರಾಮರ್ಶೆ ಸಭೆ ನಡೆದಿದ್ದು, ಬಳಿಕ ಮಾತನಾಡಿದ ಯಡಿಯೂರಪ್ಪ ಮೇ 23ರ ಸಭೆ ಬಗ್ಗೆ ಮಾಹಿತಿ ನೀಡಿದರು. ಅಂದು ಸಂಜೆ 5 ಗಂಟೆಗೆ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಸಭೆ ನಡೆಯಲಿದೆ ಎಂದರು.

22 ರಿಂದ 23 ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಅವರಿಗೆ ಧೈರ್ಯ ತುಂಬಿ ಕೆಲಸದಲ್ಲಿ ನಿರತರಾಗಿ ಅಂತ ಹೇಳಬೇಕಿದೆ. ಸೋತಂತಹ ನಮ್ಮ ಅಭ್ಯರ್ಥಿಗಳ ಜೊತೆ 2 ಗಂಟೆಗಳ ಕಾಲ ಚರ್ಚೆ ನಡೆಸ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಇನ್ನು ತಮ್ಮ ಮುಂದಿನ ಹೆಜ್ಜೆ ಕುರಿತು ಈ ಸರ್ಕಾರ ಏನು ಎತ್ತ ಅಂತ ನೋಡೋಣ. ಅವರ ಕ್ಯಾಬಿನೆಟ್ ರಚನೆ ಕಾರ್ಯ ಮುಗೀಲಿ. ಅದಕ್ಕೆ ಮುಂಚೆ ಯಾವುದೇ ನಿರ್ಧಾರವನ್ನ ನಾವು ತೆಗೆದುಕೊಳ್ಳೋದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ