ನಗರದ ಮೂರು ಕಡೆ ಮೂರು ಮನೆಗಳ ಬೀಗ ಒಡೆದು ಒಳನುಗ್ಗಿ ದರೋಡೆ

ಬೆಂಗಳೂರು,ಮೇ14-ನಗರದ ಮೂರು ಕಡೆ ಮೂರು ಮನೆಗಳ ಬೀಗ ಒಡೆದು ಒಳನುಗ್ಗಿದ ಚೋರರು ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.
ಕೋಣನಕುಂಟೆ: ಮತ ಚಲಾಯಿಸಲೆಂದು ಕುಟುಂಬ ಸಮೇತ ಪಾವಗಡಕ್ಕೆ ತೆರಳಿದ್ದಾಗ ಕಳ್ಳರು ಮನೆಯ ಬೀಗ ಒಡೆದು 3.30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ.

ನಾರಾಯಣನಗರದ ಒಂದನೇ ಬ್ಲಾಕ್ ನಿವಾಸಿ ರಾಮಮೂರ್ತಿ ಕುಟುಂಬ ಮತ ಚಲಾಯಿಸಲು ತೆರಳಿದ್ದಾಗ ಇತ್ತ ಕಳ್ಳತನ ನಡೆದಿದೆ.

ಕೊಡುಗೆಹಳ್ಳಿ: ಸಹಕಾರನಗರದ ನಿವಾಸಿ ಗೋಪಾಲ್ ಎಂಬುವರು ಕುಟುಂಬ ಸಮೇತ ಊರಿಗೆ ತೆರಳಿದ್ದಾಗ ಕಳ್ಳರು ಇವರ ಮನೆಯಬಾಗಿಲು ಒಡೆದು ಆರು ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನದ ಆಭರಣವನ್ನು ಕದ್ದೊಯ್ದಿದ್ದಾರೆ.

ಹೆಣ್ಣೂರು: ಹೊರಮಾವಿನ ಬಂಜಾರ ಆರ್ಚ್ ನಿವಾಸಿ ಸಲೀನಾ ಟೀನಾ ಕುಟುಂಬದವರು ಮೇ 6ರಂದು ಊರಿಗೆ ತೆರಳಿದ್ದಾಗ ಇವರ ಮನೆಯ ಬೀಗ ಒಡೆದು ಒಳನುಗ್ಗಿದ ಚೋರರು ಬೀರುವನ್ನು ಮೀಟಿ ಅದರಲ್ಲಿದ್ದ ಆರು ಲಕ್ಷ ಬೆಲೆಯ ಆಭರಣವನ್ನು ಕಳ್ಳತನ ಮಾಡಿದ್ದಾರೆ.

ಈ ಮೂರು ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ