ಲೊಟ್ಟೆಗೊಲ್ಲಹಳ್ಳಿ, ಮನ್ನೇರಾಳದಲ್ಲಿ ಮರು ಮತದಾನ ಆರಂಭ 

ಬೆಂಗಳೂರು,ಮೇ 14

ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಂಡಿದ್ದ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಬೂತ್ ನಂಬರ್ 2ರಲ್ಲಿ ಹಾಗು ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮನ್ನೇರಾಳದ ಬೂತ್ ನಂಬರ್ 20 ಮತ್ತು 21ರಲ್ಲಿ, ಮತಗಟ್ಟೆ ಕೇಂದ್ರ ಬದಲಾಗಿ ಸ್ಥಗಿತಗೊಂಡಿದ್ದ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಇಂದು ಬೆಳಿಗ್ಗೆಯಿಂದ ನಡೆಯುತ್ತಿದೆ.

ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಮೇ 12 ರಂದು ಮತದಾನ ಪ್ರಕ್ರಿಯೆ ನಡೆಯುವ ಸಂದರ್ಭ ಇವಿಎಂ ಮೆಷಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಇದರಿಂದ ಇಲ್ಲಿನ ಮತಗಟ್ಟೆಯಲ್ಲಿ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮನ್ನೇರಾಳದಲ್ಲಿ ಬೂತ್ ನಂಬರ್ 20 ರಲ್ಲಿ ಮತಕಟ್ಟೆ ಕೇಂದ್ರ ಬದಲಾಗಿದ್ದರಿಂದ ಅಲ್ಲಿನ 21 ಮತಗಟ್ಟೆಯ ಮತದಾರರು 20 ನಂಬರಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದರು ಹಾಗಾಗಿ ಇಲ್ಲಿನ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಸ್ಥಗಿತಗೊಂಡ ಮತಗಟ್ಟೆಗಳಲ್ಲಿ ಮೇ 14ರಂದು ಮರುಮತದಾನ ನಡೆಸುವುದಾಗಿ ಚುನಾವಣಾ ಅಧಿಕಾರಿಗಳು ಹೇಳಿದ್ದು ಇಂದು ಎರಡು ಕ್ಷೇತ್ರಗಳ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರೀಯೆ ಪ್ರಾರಂಭಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ