ವ್ಯಕ್ತಿಯೊಬ್ಬರು ಹಳಿ ದಾಟಲು ಮುಂದಾದಾಗ ರೈಲಿಗೆ ಸಿಕ್ಕಿ ಮೃತ

ಬೆಂಗಳೂರು,ಮೇ14-ರೈಲು ಬರುತ್ತಿರುವುದನ್ನು ಗಮನಿಸದೆ ವ್ಯಕ್ತಿಯೊಬ್ಬರು ಹಳಿ ದಾಟಲು ಮುಂದಾದಾಗ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‍ಟಿನಗರದ ನಿವಾಸಿ ವೆಂಕಟರಾಮುಲು(55) ಮೃತಪಟ್ಟ ದುರ್ದೈವಿ.

ರಾತ್ರಿ ವೆಂಕಟರಾಮುಲು ಅವರು ಕಂಟೋನ್ಮೆಂಟ್ ರೈಲ್ವೆ ವ್ಯಾಪ್ತಿಯ ಹೂಡಿ-ದೇವನಗುಂದಿ ಮಧ್ಯೆ ಹಾದುಹೋಗುವ ಸಾದರಮಂಗಲ ಬಳಿ ಹಳಿ ದಾಟುತ್ತಿದ್ದಾಗ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದ ಕಂಟೋನ್ಮೆಂಟ್ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಬೋರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ