ಜನರ ಹೃದಯದಲ್ಲಿ ನೆಲೆಸುವ ತನಕ ವಿರಾಮಿಸುವುದಿಲ್ಲ: ನೌಹೀರಾ ಶೇಕ್

ಬೆಂಗಳೂರು ಮೇ 13: ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಎಂಇಪಿ ರಾಜ್ಯದ ಜನತೆಯಲ್ಲಿ ಹೊಸ ಸಂಚಲನ ಮೂಡಿಸಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆಯುವ ಮಟ್ಟಕ್ಕೆ ಬೆಳೆಯಲು ಕಾರಣರಾದ ಮತದಾರ ಪ್ರಭುಗಳಿಗೆ ಎಷ್ಟು ಅಭಿನಂದನೆ ಸಲ್ಲಿಸಿದರು ಸಾಲದು ಸೋಲು-ಗೆಲುವು ಎಂದಿಗೂ ನಮ್ಮನ್ನು ಅಧೀರರನ್ನಾಗಿ ಮಾಡುವುದಿಲ್ಲ. ಫಲಿತಾಂಶ ಏನೇ ಬರಲಿ ಪಕ್ಷ ಸಂಘಟಿಸಿ ಭದ್ರಾ ಬುನಾದಿ ಹಾಕಿ ಎಂಇಪಿ ಪಕ್ಷವನ್ನು ಪರ್ಯಾಯ ರಾಜಕೀಯ ಶಕ್ತಿಯನ್ನಾಗಿಸಿ ರೂಪಿಸಿ ಕನ್ನಡಿಗರ ಹೃದಯದಲ್ಲಿ ನೆಲೆಸುವವರೆಗೆ ವಿರಮಿಸುವುದಿಲ್ಲ.

ಅಲ್ಪಕಾಲದಲ್ಲೇ ಎಂಇಪಿಗೆ ಮಹಾಪೂರ ಬೆಂಬಲ ನೀಡಿದ ರಾಜ್ಯದ ಜನತೆ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಸಮಸ್ತ ಮತದಾರ ಬಂಧುಗಳಿಗೆ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳನ್ನು ಹೇಳ ಬಯಸುತ್ತೇನೆ. ಮುಂದೆಯೂ ಇದೇ ರೀತಿ ಸಹಕಾರ ನೀಡುವೆರೆಂಬ ವಿಶ್ವಾಸವನ್ನು ಡಾ.ನೌಹೀರಾ ಶೇಕ್ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿದ ರಾಜ್ಯದ ಮಹಾ ಜನತೆಗೆ, ಚುನಾಚಣಾಧಿಕಾರಿಗಳಿಗೆ ಮತ್ತು ಭದ್ರತಾ ಸಿಬ್ಬಂದಿಗೆ ಎಂಇಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ ಅಭಿನಂದನೆ ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ