ಕನಕಗಿರಿ ವಿಧಾನಸಭಾ ಕ್ಷೇತ್ರದ ಯರಡೋಣ ಗ್ರಾಮದ ಮತಗಟ್ಟೆಗಳಿಗೆ ಮಾಟಮಂತ್ರ!

ಗಂಗಾವತಿ, ಮೇ 12-ತಾಲೂಕಿನ ಯರಡೋಣ ಗ್ರಾಮದ ಮತಗಟ್ಟೆಗಳಿಗೆ ಮಾಟಮಂತ್ರ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ಯರಡೋಣ ಗ್ರಾಮದ 6 ನೇ ವಾರ್ಡ್‍ನಲ್ಲಿನ ಮತಗಟ್ಟೆಗಳಿಗೆ ಒಂದು ಪಕ್ಷದ ಮುಖಂಡರೊಬ್ಬರು ಕೇರಳದಿಂದ ವಾಮಾಚಾರ ಮಾಡಿಸಿಕೊಂಡು ತಂದ ಅಕ್ಕಿ ಕಾಳುಗಳನ್ನು ಅಲ್ಲಲ್ಲಿ ಹಾಕಿದ್ದಾರೆ ಎಂದು ಎನ್ನಲಾಗಿದೆ.
ಬೆಳಗ್ಗೆ ಈ ಮುಖಂಡ ಮಂತ್ರಿಸಿದ ಅಕ್ಕಿ ಕಾಳುಗಳನ್ನು ಹಾಕುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಅಲ್ಲದೆ ಕೇರಳದಿಂದ 10 ಜನರ ತಂಡ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗಿದೆ. ಎರಡು ಪಕ್ಷಗಳ ನಡುವೆ ಗಲಾಟೆ ಸಂಭವಿಸುವ ಲಕ್ಷಣಗಳು ಗೋಚರಿಸಿದ್ದರಿಂದ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ