ಮತಗಳಿಸಲು ಹಣ ಹಂಚಿ ಆಮಿಷ: ಕಲಬುರ್ಗಿಯ ಬಸವನಗರದಲ್ಲಿ ಮಹಿಳಾ ಸಂಘಗಳಿಗೆ 10ಸಾವಿರ ರೂ. ಹಣ ಹಂಚಿದ ಪಕ್ಷ

ಬೆಂಗಳೂರು, ಮೇ 12- ಮತಗಳಿಸಲು ಹಣ ಹಂಚಿ ಆಮಿಷ ಒಡ್ಡುವ ಪ್ರಕ್ರಿಯೆ ಮತದಾನದ ದಿನವೂ ಮುಂದುವರೆದಿದ್ದು, ರಾಜ್ಯದ ಒಂದೆರಡು ಕಡೆ ಇಂದೂ ಸಹ ಮತದಾರರಿಗೆ ಹಣ ಹಂಚಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರ್ಗಿಯ ಬಸವನಗರದಲ್ಲಿ ಮಹಿಳಾ ಸಂಘಗಳಿಗೆ 10ಸಾವಿರ ರೂ.ನಂತೆ ರಾಜಕೀಯ ಪಕ್ಷವೊಂದರಿಂದ ಹಣ ಹಂಚಲಾಗುತ್ತಿತ್ತು. ಇದನ್ನು ಕಂಡ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಕಾರ್ಮಿಕರಿಗೆ ಹಣ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗನನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ಆಜಾದ್‍ನಗರದಲ್ಲಿ ಮತದಾರರಿಗೆ 500ರೂ. ಹಂಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚ್ಚುತ್ತಿದ್ದ ಬಗ್ಗೆ ಆಕ್ರೋಶಕೊಂಡ ಇತರೆ ಪಕ್ಷಗಳ ಕಾರ್ಯಕರ್ತರು ವಿರೋಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ