ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳು ಹಾಗೂ ಧರ್ನಸ್ಥಳದಲ್ಲಿ ವಿರೇಂದ್ರ ಹೆಗ್ಗಡೆ ಮತದಾನ

ತುಮಕೂರು:ಮೇ-12: ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶತಾಯುಷಿ, ಪದ್ಮಭೂಷಣ ,ಕರ್ನಾಟಕ ರತ್ನ ,ಪ್ರಶಸ್ತಿ ಪುರಸ್ಕೃತ ಡಾ.ಶಿವಕುಮಾರ ಸ್ವಾಮೀಜಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶ್ರೀ ಸಿದ್ದಗಂಗಾ ಮಠದ ಸನಿವಾಸ ಹಿರಿಯ ಪ್ರಾಥಮಿಕ ಶಾಲೆಯ 113 ನೇ ಮತ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದರು .

ಉಳಿದಂತೆ ನಗರ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗಿನಿಂದಲೆ ಜನರು ಮಹಿಳೆಯರು – ಪುರುಷರು ಸಾಲಿನಲ್ಲಿ ನಂತು ತಮ್ಮ ಮತ ಹಕ್ಕನ್ನು ಚಲಾಯಿಸಿದರು.

ಬೆಳಿಗ್ಗೆ ಹತ್ತು ಗಂಟೆಗಳ ಸಮಯಕ್ಕೆ ಶೇ10 ರಷ್ಟು ಮತದಾನವಾಗಿರುವ ಬಗ್ಗೆ ಚುನಾವಣಾ ಧಿಕಾರಿಗಳು ಮಾಹಿತಿ ನೀಡಿದರು .

ಇನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಪತ್ನಿ ಹೇಮಾವತಿ ದಂಪತಿಗಳು ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ