ಮಗುವೊಂದು ನಿದ್ದೆ ಮಾಡಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಸಾಂಬರ್ ಸೌಟ್‍ನಿಂದ ಬರೆ!

ಬೇಲೂರು, ಮೇ 11- ಮಗುವೊಂದು ನಿದ್ದೆ ಮಾಡಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಸಾಂಬರ್ ಸೌಟ್‍ನಿಂದ ಬರೆ ಹಾಕಿರುವ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಜೈಭೀಮ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಊಟ ಬಡಿಸಿದ ನಂತರ ಮಲಗಿಸಿದ್ದಾರೆ. ಆದರೆ ಗಾನವಿ ಎಂಬ ಮೂರು ವರ್ಷದ ಮಗು ನಿದ್ದೆ ಮಾಡದೆ ಅಳುತಿತ್ತು. ಮಗು ಅಳುತ್ತಿರುವುದನ್ನು ಸಹಿಸದ ಅಂಗನವಾಡಿ ಕೇಂದ್ರದ ಸಹಾಯಕಿ ಇಂದ್ರಮ್ಮ ಮಲಗುವಂತೆ ಕೈಯಿಂದ ಹೊಡೆದು ನಂತರ ಸಾಂಬರ್ ಸೌಟನ್ನು ಬಿಸಿ ಮಾಡಿ ಮಗುವಿನ ಗಲ್ಲ ಹಾಗೂ ಕೆನ್ನೆಗೆ ಬರೆ ಬರುವಂತೆ ಸುಟ್ಟಿದ್ದಾರೆ.
ಇದರಿಂದ ಮಗು ಹೆದರಿ ಸುಮ್ಮನೆ ಮಲಗಿದೆ. ನಂತರ ಮಗುವು ಅಂಗನವಾಡಿ ಕೇಂದ್ರದಿಂದ ಮನೆಗೆ ಹೋದ ಸಂದರ್ಭದಲ್ಲಿ ತಾಯಿ ಪಾರ್ವತಿ ಮಗುವಿನ ಗಾಯಗಳನ್ನು ನೋಡಿ ತಮ್ಮ ಸಹೋದರ ಶಿವಪ್ಪನಿಗೆ ತಿಳಿಸಿದ್ದಾರೆ. ಅಷ್ಟರಲ್ಲಿ ಸಹಾಯಕಿ ಮನೆಗೆ ತೆರಳಿದ್ದರು.
ಮಗುವಿನ ಪೆÇೀಷಕರು ಹಾಗೂ ಇತರೆ ಮಕ್ಕಳ ಪೆÇೀಷಕರು ಅಂಗನವಾಡಿ ಕೇಂದ್ರಕ್ಕೆ ಬಂದು ಮಗುವಿಗೆ ಬರೆ ಹಾಕಿರುವ ಬಗ್ಗೆ ವಿಚಾರಿಸಿದಾಗ ಅಂಗನವಾಡಿ ಸಹಾಯಕಿ ಉಡಾಫೆಯಿಂದ ವರ್ತಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೆÇೀಷಕರು ಅಂಗನವಾಡಿ ಸಹಾಯಕಿಯರನ್ನು ತರಾಟೆಗೆ ತೆಗೆದುಕೊಂಡು ನಂತರ ಬೇಲೂರು ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಪೆÇಲೀಸರು ದೂರು ಸ್ವೀಕರಿಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ವೇಳೆ ಸಹಾಯಕಿಯ ವಿರುದ್ದ ಪೆÇೀಷಕರು ಆಕ್ರೋಶ ವ್ಯಕ್ತಪಡಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಮಂಜುನಾಥ್, ಇಲ್ಲಿನ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಯ ವಿರುದ್ದ ಸಾಕಷ್ಟು ತಿಂಗಳ ಹಿಂದೆಯೇ ದೂರು ನೀಡಲಾಗಿತ್ತು. ಅಂದು ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ. ತಕ್ಷಣವೇ ಇವರುಗಳ ವಿರುದ್ದ ಕ್ರಮ ಕೈಗೊಂಡು ಮಗುವಿನ ಪೆÇೀಷಕರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪೆÇೀಷಕರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೆÇೀಷಕರಾದ ಚಂದ್ರಮ್ಮ, ದ್ರಾP್ಷÁಹಿಣಿ, ಶೇಷಮ್ಮ, ಸಗನಮ್ಮ, ಶೇಕರ್, ವಿಶ್ವ, ಗುರು, ಮನು ಇನ್ನಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ