ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಪರವಾಗಿ ವೀರಶೈವ ಮುಖಂಡರು ಕೆಲಸ ಮಾಡುವುದಿಲ್ಲ!

ಮೈಸೂರು, ಮೇ 10- ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ ಪರವಾಗಿ ವೀರಶೈವ ಮುಖಂಡರು ಕೆಲಸ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ವೀರಶೈವ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ರಾಮದಾಸ್ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ರಾಮದಾಸ್ ಸಚಿವರಾಗಿದ್ದಾಗಲೂ ವೀರಶೈವರಿಗೆ ಯಾವುದೇ ನೆರವು ನೀಡಲಿಲ್ಲ. ನಂತರವೂ ಮಾಡಿಲ್ಲ. ಚುನಾವಣೆಗೆ ಟಿಕೆಟ್ ಸಿಕ್ಕ ನಂತರವೂ ನಮ್ಮ ಸಮಾಜ ಬಾಂಧವರನ್ನು ಭೇಟಿಯಾಗಿಲ್ಲ. ಇದುವರೆಗೆ ಸುಮ್ಮನಿದ್ದು, ಚುನಾವಣೆಗೆ ಎರಡು ದಿನ ಇರುವಾಗ ಬೆಂಬಲ ಕೇಳಲು ಬಂದಿದ್ದಾರೆ. ಹಾಗಾಗಿ ನಮ್ಮ ಮುಖಂಡರು ಅವರ ಪರ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ, ವೀರಶೈವ ಮುಖಂಡರನ್ನು ಸಮಾಧಾನಪಡಿಸಲು ಮುಂದಾದರು. ರಾಮದಾಸ್ ಪರ ಕೆಲಸ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅವರ ಯವುದೇ ಮಾತಿಗೂ ಮನ್ನಣೆ ನೀಡದೆ ರಾಮದಾಸ್‍ಗಾಗಿ ಕೆಲಸ ಮಾಡುವುದಿಲ್ಲ ಎಂದು ಮುಖಮಡರು ಖಡಕ್ಕಾಗಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ