ಬ್ಯೂಟಿಪಾರ್ಲರ್‍ಗೆ ನುಗ್ಗಿ ಮಹಿಳೆಯನ್ನು ಸುಲಿಗೆ ಮಾಡಿದ್ದ ಮೂವರು ಸುಲಿಗೆಕೋರರ ವಶ:

ಮೈಸೂರು,ಮೇ 9- ಬ್ಯೂಟಿಪಾರ್ಲರ್‍ಗೆ ನುಗ್ಗಿ ಮಹಿಳೆಯನ್ನು ಸುಲಿಗೆ ಮಾಡಿದ್ದ ಮೂವರು ಸುಲಿಗೆಕೋರರನ್ನು ನಗರದ ಸಿಸಿ ಪೆÇಲೀಸರು ಬಂಧಿಸಿದ್ದಾರೆ.
ಗಾಯತ್ರಿಪುರಂ ನಿವಾಸಿಗಳಾದ ಅರುಣಾ(29), ರಂಗಸ್ವಾಮಿ(25), ಪವಿತ್ರ(29) ಬಂಧಿತರು.
ಬಂಧಿತರಿಂದ 1.5 ಲಕ್ಷ ರೂ. ಬೆಲೆಯ 50 ಗ್ರಾಂ ಚಿನ್ನದ ಸರ, 1530 ರೂ. ನಗದು ಹಾಗೂ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಮೇ 1ರಂದು ವಿದ್ಯಾರಣ್ಯಾಪುರ ವ್ಯಾಪ್ತಿಯ ಮಹರ್ಷಿ ಶಾಲಾ ರಸ್ತೆಯಲ್ಲಿರುವ ಋಷಿಕಾ ಬ್ಯೂಟಿಪಾರ್ಲರ್‍ಗೆ ಇಬ್ಬರು ಅಪರಿಚಿತರು ನುಗ್ಗಿ ಮಹಿಳೆಯನ್ನು ಬೆದರಿಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದರು.  ಈ ಬಗ್ಗೆ ವಿದ್ಯಾರಣ್ಯಪುರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತದನಂತರ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಸಿಸಿಬಿಯ ಎಸಿಪಿ ಲಿಂಗಪ್ಪ , ಇನ್‍ಸ್ಪೆಕ್ಟರ್‍ಗಳಾದ ಶಿವಸ್ವಾಮಿ, ಶಿವಪ್ರಕಾಶ್ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ