ಅಕ್ರಮವಾಗಿ ಶೇಖರಿಸಿದ್ದ ಮದ್ಯ ವಶ:

ಕುಣಿಗಲ್, ಮೇ 7-ಕಾರ್ಯಕರ್ತರಿಗೆ ಹಂಚಲೆಂದು ಮನೆಯಲ್ಲಿ ಅಕ್ರಮವಾಗಿ ಶೇಖರಿಸಿದ್ದ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿರುವ ಘಟನೆ ಹುಲಿಯೂರು ದುರ್ಗ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಲಿಯೂರು ದುರ್ಗ ಹೋಬಳಿಯ ಉಜ್ಜಿನಿ ಗ್ರಾಮದ ನಿವಾಸಿ ಉಮೇಶ್ ಬಂಧಿತ ಆರೋಪಿ.
ಈತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಚುನಾವಣೆಗೆ ಹಂಚಲೆಂದು ಮದ್ಯದ ಕೇಸುಗಳನ್ನು ಶೇಖರಿಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 3 ಕೇಸ್ ಮದ್ಯವನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಉಮೇಶ್ ಬಂಧನವಾಗುತ್ತಿದ್ದಂತೆ ಬೇರೊಂದು ಮನೆಯೊಂದರಲ್ಲಿ ಗೌಪ್ಯವಾಗಿಟ್ಟಿದ್ದ ಸುಮಾರು 30 ಕೇಸ್ ಮದ್ಯವನ್ನು ಗ್ರಾಮಸ್ಥರೇ ಮನೆಯ ಬೀಗ ಒಡೆದು ಒಳನುಗ್ಗಿ ಮದ್ಯವನ್ನು ಹೊತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಹುಲಿಯೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ