ಸಿ ವಿ ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿ ಸಂಪತ್ ರಾಜ್ ಪರ ಭರ್ಜರಿ ಪ್ರಚಾರ ನಡೆಸಿದ ಓಮನಚಾಂಡಿ, ಶಶಿತರೂರ್,ಹೆಚ್.ಟಿ.ಸಾಂಗ್ಲಿಯಾನಾ

ಬೆಂಗಳೂರು:ಮೇ-5:ಸಿ.ವಿ.ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿಪರ ಪ್ರಚಾರಕ್ಕಾಗಿ ಕೇರಳ ಮಾಜಿ ಮುಖ್ಯಮಂತ್ರಿ ಓಮನಚಾಂಡಿ ,ಲೋಕಸಭಾ ಸದಸ್ಯರಾದ ಶಶಿತರುರೂ ಮತ್ತು ಸಿ.ವಿ.ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿ,ಮಹಾಪೌರರಾದ ಸಂಪತ್ ರಾಜ್ ಮತ್ತು ನಿವೃತ್ತ ರಾಜ್ಯ ಮುಖ್ಯ ಕಾರ್ಯದರ್ಶಿ ಜೆ.ಹೆಚ್.ಅಲೆಗ್ಯಾಂಡರ್ ,ಮಾಜಿ ಲೋಕಸಭಾ ಸದಸ್ಯರಾದ ಹೆಚ್.ಟಿ.ಸಾಂಗ್ಗಿಯಾನಾ ಮತ್ತು ಕೇರಳ ರಾಜ್ಯದ ಲೋಕಸಭಾ ಸದಸ್ಯರಾದ ಅಂಟನಿ ಮತ್ತು ತೆಲಂಗಾಣ ರಾಜ್ಯದ ಮಾಜಿ ಸಚಿವರಾದ ಗೀತಾ ರೆಡ್ಡಿ ರವರು ಇಂದಿರಾನಗರದಲ್ಲಿ ಸಮಾವೇಶ ಹಾಗೂ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದರು .

ತದನಂತರ ಮಾತನಾಡಿದ ಕೇರಳ ಮಾಜಿ ಮುಖ್ಯಮಂತ್ರಿ ಓಮನಚಾಂಡಿರವರು ಕೇಂದ್ರ ಬಿ.ಜೆ.ಪಿ.ಸರ್ಕಾರ ಆಡಳಿತ ವೈಖರಿ ಬಗ್ಗೆ ಖಂಡನೆ ವ್ಯಕ್ತಪಡಿಸಿದರು .ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಹಾಗೂ ಸಿ.ವಿ.ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿ ಸಂಪತ್ ರಾಜ್ ಉತ್ತಮ ವ್ಯಕ್ತಿ ಅವರಿಗೆ ಬಾರಿ ಬಹುಮತ ನೀಡಿ ಆಯ್ಕೆ ಮಾಡಬೇಕು ಎಂದರು .

ಲೋಕಸಭಾ ಸದಸ್ಯರಾದ ಶಶಿತರುರೂ ಮಾತನಾಡಿ ಕೇಂದ್ರ ಬಿ.ಜೆ.ಪಿ.ಸರ್ಕಾರ ನಾಲ್ಕು ವರ್ಷದಿಂದ ಜನತೆಗೆ ಸುಳ್ಳು ಭರವಸೆ ನೀಡುತ್ತಿದೆ ಹಾಗೂ ದೇಶದ ಐಕ್ಯತೆ ,ಸಾಮರಸ್ಯ ದಿಂದ ಇರಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಕೆಲಸದಿಂದ ಉತ್ತಮ ಹೆಸರು ಗಳಿಸಿದೆ ಎಂದರು .

ಮಹಾಪೌರರು,ಕಾಂಗ್ರೆಸ್ ಅಭ್ಯರ್ಥಿಯಾದ ಸಂಪತ್ ರಾಜ್ ರವರು ಮಾತನಾಡಿ ನಾನು ಪಾಲಿಕೆ ಸದಸ್ಯನಾಗಿ ಪ್ರತಿನಿಧಿಸುವ ಡಿ.ಜೆ.ಹಳ್ಳಿ ಅಭಿವೃದ್ದಿ ಹಾಗೂ ಕಳೆದ ಆರು ತಿಂಗಳು ಮಹಾಪೌರರಾಗಿ ಉತ್ತಮ ಸೇವೆ ಸಲ್ಲಿಸಿದ ಕಾರಣ ಕಾಂಗ್ರೆಸ್ ಪಕ್ಷ ನನಗೆ ಸಿ.ವಿ.ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ .ಬೆಂಗಳೂರು ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ 12ಸಾವಿರ ಕೋಟಿ ರೂಪಾಯಿಗಳನ್ನು ನೀಡಿದೆ .ಅಭಿವೃದ್ದಿ ಕೆಲಸಗಳು ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾಗಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ