ನಾಲ್ಕು ಬಾರಿಯಿಂದ ನಾವೇ ಗೆಲ್ಲಿಸಿರುವಂತಹ ನಮಗೆ ತನ್ವೀರ್‍ಸೇಠ್ ತುಂಬ ತೊಂದರೆ ಚುನಾವಣೆಯಲ್ಲಿ ಸೋಲಿಸುವುದಾಗಿ ಸೂಫಿ ಗುರುಗಳು ಹೇಳಿದ್ದಾರೆ

ಮೈಸೂರು,ಮೇ4-ಕಳೆದ ನಾಲ್ಕು ಬಾರಿಯಿಂದ ನಾವೇ ಗೆಲ್ಲಿಸಿರುವಂತಹ ನಮಗೆ ತನ್ವೀರ್‍ಸೇಠ್ ತುಂಬ ತೊಂದರೆ ನೀಡಿರುವುದರಿಂದ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವುದಾಗಿ ಸೂಫಿ ಗುರುಗಳು ಹೇಳಿದ್ದಾರೆ.

ನಗರದ ಎನ್.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಸೂಫಿ ಗುರುಗಳು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಅವರನ್ನು ಗೆಲ್ಲಿಸಬೇಕೆಂದು ಈ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

ತನ್ವೀರ್ ಸೇಠ್ ಅವರನ್ನು 4 ಬಾರಿ ಗೆಲ್ಲಿಸಿದ್ದೇವೆ. ಅವರು ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಮಸೀದಿಗಳಲ್ಲಿ ಸಮಿತಿಗಳನ್ನು ಬದಲಿಸುವುದು ಹಾಗೂ ನಮ್ಮಂತಹ ಕೆಲ ಸೂಫಿಗಳಿಗೆ ಮಸೀದಿಗೆ ತೆರಳದಂತೆ ತೊಂದರೆ ನೀಡಿ ಪೆÇಲೀಸ್ ಠಾಣೆಗೆ ಅಲೆಯುವಂತೆ ಮಾಡಿದ್ದಾರೆ. ಇವರಿಂದ ಕ್ಷೇತ್ರದ ಜನತೆಗೆ ಉಪಯೋಗವಿಲ್ಲ. ಹಾಗಾಗಿ ಇವರನ್ನು ಸೋಲಿಸಬೇಕೆಂದು ಆಗ್ರಹಿಸಿದ್ದಾರೆ.

ನಾವುಗಳು ಕ್ಷೇತ್ರದ ಪ್ರತಿ ಮನೆ ಮನೆಗೆ ತೆರಳಿ ತನ್ವೀರ್ ಸೇಠ್ ಅವರನ್ನು ಸೋಲಿಸುವಂತೆ ಮನವಿ ಮಾಡುವುದಾಗಿ ಪ್ರಚಾರದ ವೇಳೆ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ