ಉಗ್ರರ ಚಟುವಟಿಕೆಗಳಿಗೆ ಜೆಡಿಎಸ್ ಎಂದೂ ಬೆಂಬಲ ನೀಡುವುದಿಲ್ಲ : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ವಿಜಯಪುರ, ಮೇ 4-ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳಿಗೆ ಜೆಡಿಎಸ್ ಎಂದೂ ಬೆಂಬಲ ನೀಡುವುದಿಲ್ಲ. ಇದನ್ನು ಮೊದಲು ಮೋದಿಯವರು ತಿಳಿದುಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮುದ್ದೇಬಿಹಾಳ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪರ ಅಸಾದುದ್ದೀನ್ ಓವೈಸಿ ಪ್ರಚಾರ ಹಿನ್ನೆಲೆಯಲ್ಲಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾವಾಗ ಟೆರರಿಸ್ಟ್ ಆಕ್ಟಿವಿಟೀಸ್ ಮಾಡಬೇಕು ಎನ್ನುವ ನಿಮ್ಮಂತಹ ಅತೀ ಬುದ್ಧಿವಂತಿಕೆ ನಮ್ಮಲ್ಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ಉಗ್ರಗಾಮಿಗಳನ್ನು ರಾಜ್ಯಕ್ಕೆ ಕರೆಸಿಕೊಳ್ಳುತ್ತಿದೆ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮೋದಿ ತಮ್ಮ ಪಕ್ಷದಲ್ಲೇ ಉಗ್ರಗಾಮಿಗಳನ್ನು ಇಟ್ಟುಕೊಂಡಿದ್ದೀರಿ. ಆದರೆ ಜೆಡಿಎಸ್ ಕರ್ನಾಟಕದಲ್ಲಿ ಭ್ರಷ್ಟರು, ಉಗ್ರಗಾಮಿಗಳಿಗೆ ಪೆÇ್ರೀ ಕೊಟ್ಟಿದ್ದೇ ಇಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ