ನಾಗಮಾರಪಳ್ಳಿಯವರ ಕಟ್ಟಾ ಬೆಂಬಲಿಗರು ಶಾಸಕ ಪ್ರಭು ಚವ್ಹಾಣ್ ಸಾರಥ್ಯಕ್ಕೆ ಸೈ ಎನ್ನುವ ಮೂಲಕ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ನಾಗಮಾರಪಳ್ಳಿ ಬೆಂಬಲಿಗರು ಬಿಜೆಪಿ ಸೇರ್ಪಡೆ
ಬೀದರ್, ಮೇ. 4- ಮಾಜಿ ಸಚಿವ ಡಾ. ಗುರುಪಾದಪ್ಪ ನಾಗಮಾರಪಳ್ಳಿಯವರ ಕಟ್ಟಾ ಬೆಂಬಲಿಗರು ಶಾಸಕ ಪ್ರಭು ಚವ್ಹಾಣ್ ಸಾರಥ್ಯಕ್ಕೆ ಸೈ ಎನ್ನುವ ಮೂಲಕ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಔರಾದ್ ಕ್ಷೇತ್ರದ ಬಿಜೆಪಿಗೆ ಮತ್ತಷ್ಠು ಬಲ ಬಂದಿದೆ. ಶಾಸಕ ಚವ್ಹಾಣ್ ಶಕ್ತಿಯೂ ದ್ವಿಗುಣಗೊಂಡಿದೆ.

ಹಿರಿಯ ಮುಖಂಡರಾದ ವಿಠ್ಠಲರಾವ್ ದೇಶಮುಖ್, ಗುಂಡಯ್ಯ ಸ್ವಾಮಿ, ರಘುನಾಥ ದೇಸಾಯಿ, ಪ್ರಭುರಾವ್ ಕಸ್ತೂರೆ, ಬಾಬುರಾವ್ ದೇಸಾಯಿ ಮಾಳೆಗಾಂವ್, ಸೋಪಾನ್ ಬಿರಾದಾರ, ಅಮೃತರಾವ ಪಾರಾ, ರಾಜೇಂದ್ರ ಮುದ್ದಾ, ಅಶೋಕ ಉಚ್ಚೆ ಮತ್ತಿತರರು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತಷ್ಠು ಬಲಪಡಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ವೇಳೆ ಶಾಸಕ ಪ್ರಭು ಚವ್ಹಾಣ ಅವರು ಮಾತನಾಡಿ, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿಯವರು ನಿಮ್ಮನ್ನು ಹೇಗೆ ಮನೆಯ ಮಕ್ಕಳಂತೆ ನೋಡಿಕೊಂಡು ಸುರಕ್ಷೆ ಒದಗಿಸಿಕೊಟ್ಟಿದ್ದರೋ ಅದೇ ರೀತಿಯಲ್ಲಿ ನಾನೂ ಕೂಡ ನಡೆದುಕೊಳ್ಳುತ್ತೇನೆ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ನಡೆದುಕೊಳ್ಳೋಣ. ನಿಮ್ಮ ಯೋಗಕ್ಷೇಮ ಎಲ್ಲವೂ ನನಗೆ ಸೇರಿದೆ ಎಂದು ಭರವಸೆ ನೀಡಿದ್ದಾರೆ.
ಜಿಪಂ ಮಾಜಿ ಸದಸ್ಯ ರಮೆಶ ದೇವಕತೆ, ಯುವ ಮುಖಂಡ ಪ್ರಕಾಶ ಘೂಳೆ, ತಾಲೂಕು ಪಂಚಾಯತ್ ಸದಸ್ಯ ಸಚಿನ್ ರಾಠೋಡ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ