ಬಿಜೆಪಿಗೆ ಸೇರಿದ ಫರ್ನಾಂಡಿಸ್

ಬಿಜೆಪಿಗೆ ಸೇರಿದ ಫರ್ನಾಂಡಿಸ್
ಬೀದರ್, ಮೇ 3- ಕಾಂಗ್ರೆಸ್‍ನ ಯುವ ಮುಖಂಡ ಫರ್ನಾಂಡಿಸ್ ಹಿಪ್ಪಳಗಾಂವ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೀದರ್‍ನ ನಾವದಗೇರಿ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಬೆಂಬಲಿಗರ ಜೊತೆಯಲ್ಲಿ ಫರ್ನಾಂಡಿಸ್ ಬಿಜೆಪಿಗೆ ಸೇರಿದರು. ಕ್ಷೇತ್ರದ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಸೂರ್ಯಕಾಂತ ನಾಗಮಾರಪಳ್ಳಿ, ಬಿಜೆಪಿಗೆ ಫರ್ನಾಂಡಿಸ್ ಸೇರ್ಪಡೆಯಿಂದ ಮತ್ತಷ್ಟು ಶಕ್ತಿ ಬಂದಿದೆ. ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿಕಾಸ ರಾಜ್ಯದ ಮನೆ, ಮನೆಗಳಿಗೆ ತಲುಪಲು ಇಲ್ಲೂ ಬಿಜೆಪಿ ಸರ್ಕಾರ ಬರಬೇಕಿದೆ. ಇದಕ್ಕೆ ಎಲ್ಲ ಸಮಾಜ ಕೈಜೋಡಿಸಬೇಕು. ರಾಜ್ಯದಲ್ಲಿನ ದುಷ್ಟ ಹಾಗೂ ಭ್ರಷ್ಟ ಕಾಂಗ್ರೆಸ್ಸಿಗೆ ನಿರ್ನಾಮ ಮಾಡಲು ಸನ್ನದ್ಧರಾಗಬೇಕು ಎಂದರು.

ದೇಶದಲ್ಲಿ 6 ದಶಕ ಆಡಳಿತ ನಡೆಸಿದ ಕಾಂಗ್ರೆಸ್ ಮಾಡಿದ ಕೆಲಸಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ 4 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಸಹ ಹಲವು ಜನಪರ ಯೋಜನೆ ನೀಡಿದ್ದು, ಜನರು ಇಂದಿಗೂ ಸ್ಮರಿಸುತ್ತಿದ್ದಾರೆ.

ಮಾದರಿ ಕರ್ನಾಟಕಕ್ಕೆ ಬಿಜೆಪಿ ಅಧಿಕಾರಕ್ಕೆ ಬರುವುದು ಅಗತ್ಯವಿದೆ ಎಂದರು.
ಬಾಬು ರಾವ ಮದಕಟ್ಟಿ, ವಿಜಯಕುಮಾರ ಪಾಟೀಲ್ ಗಾದಗಿ, ರಾಜಕುಮಾರ ಚಿದ್ರಿ, ರಾಜಕುಮಾರ ಕರಂಜಿ, ರವಿ ಸ್ವಾಮಿ, ಜಗದೀಶ್ ಬಿರಾದಾರ, ಪೀರಪ್ಪ ಯರನಳ್ಳಿ ಇತರರಿದ್ದರು.
———————–

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ