ನಾನು ಕನ್ನಡಿಗ! – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ,ಏ.26-ನಾನು ಕನ್ನಡಿಗ. ಕರ್ನಾಟಕದಲ್ಲಿ ನಾನೊಬ್ಬ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಉತ್ತರಭಾರತದವರು ಎಂದು ಕಾಲೆಳೆದಿದ್ದರು.  ಇದಕ್ಕೆ ತಿರುಗೇಟು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ನಾನು ಕನ್ನಡಿಗ. ಕರ್ನಾಟಕದಲ್ಲಿ ಬಿಜೆಪಿ ಪರ ಮತ ಕೇಳಲು ನಿಮ್ಮ ಮನೆಬಾಗಿಲಿಗೆ ಬರುತ್ತೇನೆ. ಪಕ್ಷವನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.  ಕರ್ನಾಟಕ ಎಂದರೆ ನೆನಪಿಗೆ ಬರುವುದು ಶ್ರೀಗಂಧದ ಮರ. ಆಸ್ಟ್ರೇಲಿಯಾದಲ್ಲಿ ಕರ್ನಾಟಕದಿಂದ ಶ್ರೀಗಂಧ ತೆಗೆದುಕೊಂಡು ಹೋಗಿ ಬೃಹದಾಕಾರದ ಅರಣ್ಯ ಬೆಳೆಸಿದ್ದಾರೆ. ಆದರೆ ಕೆಲವರ ರಾಜ್ಯದಲ್ಲಿರುವ ಕೆಲವರ ಕಣ್ಣು ಶ್ರೀಗಂಧದ ಮೇಲೆ ಬಿದ್ದಿದೆ ಎಂದು ಕುಹುಕವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ