ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 187 ನಾಮಪತ್ರಗಳು ಸಿಂಧು:

ಮೈಸೂರು, ಏ.26-ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 197 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 14 ಮಂದಿ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿವೆ. ಒಟ್ಟಾರೆಯಾಗಿ 187 ಮಂದಿಯ ನಾಮಪತ್ರಗಳು ಸಿಂಧುವಾಗಿದೆ.
ಹುಣಸೂರು-ಡಿ.ರಾಜಣ್ಣ ಪಕ್ಷೇತರ, ಪಿ.ಆನಂದ್(ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿ) ಚಾಮುಂಡೇಶ್ವರಿ ಡಾ.ಕೆ.ಪದ್ಮರಾಜನ್ (ಪಕ್ಷೇತರ) ಕೃಷ್ಣರಾಜ-ಸೈಯ್ಯದ್, ಫಯಾಜ್, ರಾಜು, ಸೈಯ್ಯದ್ ಸಾದಿಕ್, ಆರ್.ನಾಗರಾಜ್(ಪಕ್ಷೇತರ), ಎಂ.ಎಸ್.ಬಾಲಾಜಿ (ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್) ಮಹಬೀರ್‍ಸಿಂಗ್(ಎಐಎಂಪಿ), ವರುಣ ಡಿ.ಎಸ್.ಗೀತಾಗಣೇಶ್(ಎಎಂಇಪಿ), ಎಸ್.ಸತೀಶ್‍ಕುಮಾರ್ (ಜೆಡಿಎಸ್), ಟಿ.ನರಸೀಪುರ, ನಿಂಗಯ್ಯ, ಪ್ರಕಾಶ್, ಬಿ.ಡಿ.ಮಣಿಕಂಠ(ಪಕ್ಷೇತರ) ನಾಮಪತ್ರ ತಿರಸ್ಕøತಗೊಂಡ ಅಭ್ಯರ್ಥಿಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ