ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 140 ನಾಮಪತ್ರ ಸಿಂಧು:

ಕೋಲಾರ, ಏ.26-ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಸಲಾಗಿದ್ದ 151 ನಾಮಪತ್ರಗಳ ಪರಿಶೀಲನೆ ನಡೆಸಿ ಕ್ರಮಬದ್ಧವಾಗಿದ್ದ 140 ನಾಮಪತ್ರಗಳನ್ನು ಸಿಂಧುಗೊಳಿಸಲಾಗಿದೆ. 9 ನಾಮಪತ್ರ ತಿರಸ್ಕøತಗೊಂಡು ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಮತ್ತು ಕೆಜಿಎಫ್ ಕಾಂಗ್ರೆಸ್ ಅಭ್ಯರ್ಥಿಯಾದ ರೂಪ ಶಶಿಧರ್ ಅವರ ನಾಮಪತ್ರ ಪರಿಶೀಳನೆ ಮುಂದೂಡಲಾಗಿತ್ತು.
ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ 56 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅತಿ ಹೆಚ್ಚು ನಾಮಪತ್ರ ಸಲ್ಲಿಕೆ ಕ್ಷೇತ್ರವಾಗಿದೆ. ಬಂಗಾರಪೇಟೆಯಲ್ಲಿ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಜಿಲ್ಲೆಯಲ್ಲಿ ಅತಿ ಕಡಿಮೆ ನಾಮಪತ್ರ ಸಲ್ಲಿಕೆ ಕ್ಷೇತ್ರವೆನಿಸಿದೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಜನ ನಾಮಪತ್ರ ಹಿಂಪಡೆಯದಿದ್ದಲ್ಲಿ ಎರಡು ಅಥವಾ ಮೂರು ಮತಯಂತ್ರಗಳನ್ನು ನಿಯೋಜಿಸಬೇಕಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ