ಎರಡು ಸಾವಿರ ಸೀರೆಗಳನ್ನು ನೀತಿ ಸಂಹಿತೆ ಪಾಲನಾಧಿಕಾರಿಗಳು ವಶ:

ಕುಣಿಗಲ್ ,ಏ.25- ಚುನಾವಣೆಗಾಗಿ ಮತದಾರರಿಗೆ ಹಂಚಿಕೆ ಮಾಡಲು ತೋಟದ ಮನೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಶೇಖರಿಸಿಟ್ಟಿದ್ದ ಎರಡು ಸಾವಿರ ಸೀರೆಗಳನ್ನು ನೀತಿ ಸಂಹಿತೆ ಪಾಲನಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಯಡಿಯೂರು ಹೋಬಳಿಯ ಜಲಧಿಗೆರೆ ಗ್ರಾಮದ ಕಾಂಗ್ರೆಸ್ ಮುಖಂಡ ವೆಂಕಟೇಶ್ ಎಂಬುವರು ತಮ್ಮ ತೋಟದ ಮನೆಯಲ್ಲಿ ಮಹಿಳೆಯರಿಗೆ ಹಂಚಲೆಂದು 2000 ಸೀರೆಗಳನ್ನು ಶೇಖರಿಸಿ ಇಟ್ಟಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ನೀತಿ ಸಂಹಿತೆ ಪಾಲನಾಧಿಕಾರಿಗಳು ಬೆಳೆಗ್ಗೆಯೇ ದಾಳಿ ನಡೆಸಿ ಸೀರೆಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ