ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮನ ದಕ್ಷಿಣದಿಂದ ಡಾ.ಬೆಲ್ದಾಳೆ ನಾಮಪತ್ರ ಸಲ್ಲಿಕೆ

*ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಆಗಮನ
ದಕ್ಷಿಣದಿಂದ ಡಾ.ಬೆಲ್ದಾಳೆ ನಾಮಪತ್ರ ಸಲ್ಲಿಕೆ
ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಶನಿವಾರ ನಾಮಪತ್ರ ಸಲ್ಲಿಸಿದರು. ಕೆಇಬಿ ಬಳಿಯ ತಮ್ಮ ನಿವಾಸದಿಂದ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಹಸಿಲ್ ಕಚೇರಿಗೆ ಆಗಮಿಸಿ, ಚುನಾವಣಾಧಿಕಾರಿಯಾದ ನಗರಸಭೆ ಆಯುಕ್ತ ಮನೋಹರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಬಿಜೆಪಿ ಮತ್ತು ಬೆಲ್ದಾಳೆ ಪರ ಜಯಘೋಷ ಮೊಳಗಿದವು.

ಲೋಕಸಭೆ ಸದಸ್ಯ ಭಗವಂತ ಖೂಬಾ, ಮುಖಂಡರಾದ ಬಾಬು ವಾಲಿ, ರಾಜರೆಡ್ಡಿ ಶಾಹಾಬಾದ್, ಶಕುಂತಲಾ ಬೆಲ್ದಾಳೆ ಇತರರಿದ್ದರು.

ಈ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಬೆಲ್ದಾಳೆ, ಈ ಸಲ ರಾಜ್ಯದಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‍ನಿಂದ ಬೇಸತ್ತ ಜನತೆ ಪರಿವರ್ತನೆ ಬಯಸಿದ್ದಾರೆ. ಬಿಜೆಪಿ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.
—–

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ