ಕ್ಷುಲ್ಲಕ ವಿಚಾರವಾಗಿ ಅಪ್ಪ -ಮಗನ ಮಧ್ಯೆ ಜಗಳ ನಡೆದು ಅಪ್ಪನ ಸಾವಿನಲ್ಲಿ ಅಂತ್ಯ:

ದಾವಣಗೆರೆ , ಏ.20- ಕ್ಷುಲ್ಲಕ ವಿಚಾರವಾಗಿ ಅಪ್ಪ -ಮಗನ ಮಧ್ಯೆ ಜಗಳ ನಡೆದು ಅಪ್ಪನ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ನ್ಯಾಮತಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ದೊಡ್ಡೇರಿ ಗ್ರಾಮದ ನಾಗರಾಜಪ್ಪ (50) ಸಾವನ್ನಪ್ಪಿರುವ ದುರ್ದೈವಿ.
ಇಂದು ಬೆಳಗ್ಗೆ ಕ್ಷುಲ್ಲಕ ವಿಚಾರವಾಗಿ ನಾಗರಾಜಪ್ಪ ಮತ್ತು ಮಗ ಪ್ರವೀಣ್ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ನಾಗರಾಜಪ್ಪ ಪಾನಮತ್ತರಾಗಿದ್ದರು ಎನ್ನಲಾಗಿದೆ.
ಜಗಳದ ಸಂದರ್ಭದಲ್ಲಿ ಅಪ್ಪ -ಮಗನ ಮಧ್ಯೆ ತಳ್ಳಲು-ನೂಕಾಟ ನಡೆದಿದ್ದು , ತದನಂತರ ಮಗ ಪ್ರವೀಣ್ ಹೊರಗೆ ಹೋಗಿದ್ದಾನೆ. ಇದಾದ ಒಂದು ಗಂಟೆಯೊಳಗೆ ನಾರಾಯಣಪ್ಪ ಮೃತಪಟ್ಟಿದ್ದಾರೆ.
ಹೃದಯಾಘಾತದಿಂದ ಮೃತಪಟ್ಟಿದ್ದಾರೆಯೋ ಅಥವಾ ತಳ್ಳಾಟ, ನೂಕಾಟದ ವೇಳೆ ಪೆಟ್ಟಾಗಿ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯಿಂದಲೇ ವರದಿ ಬೆಳಕಿಗೆ ಬರಬೇಕಿದೆ. ಸುದ್ದಿ ತಿಳಿ ಎಸ್ಪಿ ಚೇತನ್ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರವೀಣ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ