ಚುನಾವಣೆಗೆ ಸ್ಪರ್ಧಿಸುವುದಿರಲಿ, ಭವಿಷ್ಯದಲ್ಲಿ ನನ್ನ ಸ್ಥಾನಮಾನದ ಬಗ್ಗೆ ಮೊದಲು ನಿರ್ಧರಿಸಿ : ಅಂಬರೀಶ್

ಬೆಂಗಳೂರು, ಏ.19-ಚುನಾವಣೆಗೆ ಸ್ಪರ್ಧಿಸುವುದಿರಲಿ, ಭವಿಷ್ಯದಲ್ಲಿ ನನ್ನ ಸ್ಥಾನಮಾನದ ಬಗ್ಗೆ ಮೊದಲು ನಿರ್ಧರಿಸಿ ಎಂದು ಅಂಬರೀಶ್ ಅವರು ತಿಳಿಸಿದ್ದಾರೆ.

ಮಂಡ್ಯದಿಂದ ಸ್ಪರ್ಧಿಸಲು ಅವರು ಹೆಸರು ಘೋಷಣೆಯಾಗಿದೆ, ಬಿ ಫಾರಂ ತೆಗೆದುಕೊಂಡಿಲ್ಲ. ಬರೀ ಶಾಸಕನಾಗಲು ಬಿ ಫಾರಂ ತೆಗೆದುಕೊಳ್ಳಬೇಕಾ? ಮುಂದಿನ ಸ್ಥಾನಮಾನದ ಬಗ್ಗೆ ಮೊದಲು ನಿರ್ಧರಿಸಿ. ಈ ಹಿಂದೆ ಏಕಾಏಕಿ ಸಚಿವ ಸ್ಥಾನದಿಂದ ಕೈ ಬಿಡಲಾಗಿತ್ತು. ಚಲುವರಾಯಸ್ವಾಮಿಯನ್ನು ಪಕ್ಷಕ್ಕೆ ತೆಗೆದುಕೊಂಡಾಗ ನನ್ನನ್ನು ಒಂದು ಮಾತು ಕೇಳಿರಲಿಲ್ಲ ಎಂದು ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಜಾರ್ಜ್ ಮುಂತಾದವರು ಅಂಬರೀಶ್ ಅವರೊಂದಿಗೆ ಚರ್ಚೆ ನಡೆಸಿದಾಗ ಅಂಬಿಯವರು ಹಲವು ಷರತ್ತುಗಳನ್ನು ವಿಧಿಸಿದ್ದಾರೆ. ಮುಖ್ಯಮಂತ್ರಿಯವರು ಇನ್ನು ಅವರೊಂದಿಗೆ ಯಾವುದೇ ರೀತಿ ಚರ್ಚೆ ನಡೆಸಿಲ್ಲ. ಮೊದಲು ಚುನಾವಣೆಗೆ ಸ್ಪರ್ಧಿಸಿ, ಚುನಾವಣೆ ನಂತರ ಚರ್ಚೆ ಮಾಡೋಣ ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ.

ಅದೆಕೋ ಅಂಬಿ ಮೀನಾಮೇಷ ಎಣಿಸಿದಂತೆ ಕಂಡು ಬರುತ್ತಿದೆ. ಮಂಡ್ಯದಿಂದ ಸ್ಪರ್ಧಿಸಲು ಅಂಬಿ ಅರ್ಜಿ ಸಲ್ಲಿಸಿರಲಿಲ್ಲ. ಪಟಿಯಲ್ಲಿ ಅವರ ಹೆಸರಿತ್ತು. ಬಿ ಫಾರಂ ಪಡೆಯುವಂತೆ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ದೂರವಾಣಿ ಮೂಲಕ ಸೂಚನೆ ನೀಡಿದ್ದರು, ಇದಕ್ಕೆ ಬಂದು ಪಡೆಯುವುದಾಗಿ ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ