ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರ ಮೇಲೆ ಕೊಲೆ ಪ್ರಯತ್ನ ನಡೆಯಿತೇ?

ರಾಣೇಬೆನ್ನೂರ್ ಏ17: ಹಾವೇರಿ ಜಿಲ್ಲೆಯ ರಾಣೇಬೆನ್ನೂರ್ ತಾಲೂಕಿನಲ್ಲಿನ ಹಾಲೆಗೇರಿ ಸಮೀಪದ ಹೈವೇ ನಲ್ಲಿ ಟ್ರಕ್ ಒಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರ ಬೆಂಗಾವಲ ವಾಹನಕ್ಕೆ ಡಿಕ್ಕಿ ಹೊಡೆಯಿತು. ಅದು ಸಚಿವರ ವಾಹನವನ್ನು ಮೊದಲ ಬಾರಿಗೆ ಹೊಡೆಯಲು ಪ್ರಯತ್ನಿಸಿದ್ದು ಆದರೆ ಸಚಿವರ ವಾಹನವು ಹೆಚ್ಚಿನ ವೇಗದಲ್ಲಿದ್ದರಿಂದ ಅಪಾಯ ತಪ್ಪಿಸಿಕೊಂಡರು. ಟ್ರಕ್ ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡಲಾಗಿದ್ದು ರಸ್ತೆ ಅಡ್ಡಲಾಗಿಯೇ ನಿಲುಗಡೆ ಮಾಡಲಾಗಿತ್ತು.

ಈ ಅಫಘಾತದಲ್ಲಿ ಸಚಿವರಿಗೆ ಏನೂ ಆಗದಿದ್ದರೂ, ಬೆಂಗಾವಲು ವಾಹನದಲ್ಲಿನ ಸಿಬ್ಬಂದಿಗಳಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಸರ್ ಎಂಬ ಹೆಸರಿನ ಟ್ರಕ್ ಚಾಲಕನನ್ನು ಸ್ಥಳೀಯರು ಹಿಡಿದಿಟ್ಟುಕೊಂಡಿದ್ದಾರೆ ಮತ್ತು ಅವನು ಯಾವುದೇ ಮದ್ಯಸಾರದ ಪ್ರಭಾವದಲ್ಲಿರಲಿಲ್ಲ.

“ಚಾಲಕ ನಮ್ಮ ವಾಹನವನ್ನು ಹೊಡೆಯಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಿದ್ದಾರೆ ಮತ್ತು ನನ್ನ ಮೇಲೆ ಕೊಲೆ ಪ್ರಯತ್ನ ಮಾಡಿರಬಹುದು ಎಂದು ಸಂಶಯಿಸುತ್ತೇನೆ. ಆದ್ದರಿಂದ ನಾನು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಕೇಳುತ್ತೇನೆ. ಈ ಘಟನೆಯ ಹಿಂದೆ ದೊಡ್ಡ ನೆಕ್ಸಸ್ ವಿರಬಹುದು ಮತ್ತು ಖಚಿತವಾಗಿ ಪೋಲೀಸರು ಎಲ್ಲವನ್ನೂ ಬಹಿರಂಗಪಡಿಸುತ್ತಾರೆ” ಎಂದು ಸರಣಿ ಟ್ವೀಟ್ಗಳ ಮುಖಾಂತರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಹೇಳಿದ್ದಾರೆ.

ಹೆಚ್ಚಿನ ಮಾಹಿತಿ: https://twitter.com/anantkumarh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ