ಅಪ್ರಾಪ್ತೆಯನ್ನು ಅಪಹರಿಸಿ ವಿವಾಹ ಮಾಡಿಕೊಂಡಿದ್ದ ಯುವಕನನ್ನು ಫೆÇೀಸ್ಕೋ ಕಾಯ್ದೆಯಡಿ ಬಂಧನ:

ಕೆ.ಆರ್.ಪೇಟೆ,ಏ.17- ಅಪ್ರಾಪ್ತೆಯನ್ನು ಅಪಹರಿಸಿ ವಿವಾಹ ಮಾಡಿಕೊಂಡಿದ್ದ ಯುವಕನನ್ನು ಫೆÇೀಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ.
ತಾಲೂಕಿನ ಹೊಸಕೋಟೆ ಗ್ರಾಮದ ಶಿವರಾಜ್(22) ಬಂಧಿತ ಆರೋಪಿ.
ಘಟನೆ ವಿವರ: ತಾಲೂಕಿನ ಮಡುವಿನಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಬಾಲಕಿ ಇದೇ ಏ.6ರಂದು ಪಟ್ಟಣದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಸಿಕೊಂಡು ತನ್ನ ಅಜ್ಜಿಯ ಮನೆ ಹಿರಳಹಳ್ಳಿಗೆ ಹೋಗುತ್ತಿದ್ದಾಗ ಅಪಹರಿಸಿಕೊಂಡು ಹೋಗಿ ಕೆಆರ್‍ಎಸ್ ಬಳಿ ಇರುವ ಬಲಮುರಿ ಗಣಪತಿ ದೇವಸ್ಥಾನದಲ್ಲಿ ವಿವಾಹ ಮಾಡಿಕೊಂಡು ತಲೆಮರೆಸಿಕೊಂಡಿದ್ದನು.
ಈ ಬಾಲಕಿಯ ತಂದೆ ಹೊಸಕೋಟೆಯ ಮಂಜೇಶ್ ಅವರು ಪಟ್ಟಣ ಪೆÇೀಲಿಸ್ ಠಾಣೆಗೆ ದೂರು ನೀಡಿ ತಮ್ಮ ಮಗಳನ್ನು ಹೊಸಕೋಟೆಯ ಶಿವರಾಜ್ ಎಂಬುವವನು ಅಪಹರಿಸಿಕೊಂಡು ಹೋಗಿ ವಿವಾಹ ಮಾಡಿಕೊಂಡಿದ್ದಾನೆ. ಅಪ್ರಾಪ್ತ ಬಾಲಕಿಯಾಗಿರುವ ತಮ್ಮ ಮಗಳನ್ನು ಆತನಿಂದ ರಕ್ಷಿಸಿ ತಮಗೆ ಮರಳಿಸುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಶಿವರಾಜ್ ವಿರುದ್ದ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪಟ್ಟಣ ಪೆÇಲೀಸರು ಆರೋಪಿ ಶಿವರಾಜ್ ಬಳಸುತ್ತಿದ್ದ ಮೊಬೈಲ್ ಫೆÇೀನ್ ಟವರ್ ಲೊಕೇಶನ್ ಮೂಲಕ ನಂಜನಗೂಡಿನ ತಮ್ಮ ಪರಿಚಯಸ್ಥರ ಮನೆಯಲ್ಲಿ ತಂಗಿದ್ದ ಶಿವರಾಜ್‍ನನ್ನು ಪತ್ತೆ ಮಾಡಿ ಬಾಲಕಿಯನ್ನು ಪೆÇೀಷಕರ ವಶಕ್ಕೆ ನೀಡಿದರೆ ಶಿವರಾಜ್‍ಗೆ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ