ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಮ್ಮ ತಂದೆ ಡಾ.ಎಚ್.ಸಿ.ಮಹದೇವಪ್ಪರವರ ಸ್ಪರ್ಧೆ ಖಚಿv: ಸುನೀಲ್ ಬೋಸ್

ತಿ.ನರಸೀಪುರ, ಏ.15-ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಮ್ಮ ತಂದೆ ಡಾ.ಎಚ್.ಸಿ.ಮಹದೇವಪ್ಪರವರ ಸ್ಪರ್ಧೆ ಖಚಿತವಾಗಿದ್ದು, ನಾನು ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್ ಸ್ಪಷ್ಟಪಡಿಸಿದರು.

ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ನಿನ್ನೆ ಸಂಜೆ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು,
ಕ್ಷೇತ್ರದಲ್ಲಿ ಕಾಂಗ್ರೆಸï ಅಭ್ಯರ್ಥಿಯಾಗಿ ನಾನು ಅಥವಾ ನಮ್ಮ ತಂದೆ ಮಹದೇವಪ್ಪ ಇಬ್ಬರಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆಂಬ ಗೊಂದಲಗಳಿತ್ತು, ಆದರೆ ಅದಕ್ಕೆ ತೆರೆ ಬಿದ್ದಿದ್ದು, ತಿ.ನರಸೀಪುರ ಕ್ಷೇತ್ರದಿಂದ ನನ್ನ ತಂದೆ ಮಹದೇವಪ್ಪ ಹಾಗೂ ಬೆಂಗಳೂರಿನ ಸಿ.ವಿ.ರಾಮನ್ ಕ್ಷೇತ್ರದಿಂದ ನಾನು ಸ್ಪರ್ಧಿಸಲಿದ್ದೇವೆ ಎಂದು ತಿಳಿಸಿದರು.

ಕಳೆದ 5 ವರ್ಷಗಳ ಅವಧಿಯಲ್ಲಿ ನಮ್ಮ ತಂದೆ ಕ್ಷೇತ್ರಕ್ಕೆ ನೀಡಿರುವ ಅಭಿವೃದ್ದಿ ಕಾರ್ಯಗಳನ್ನು ಮನಗಂಡಿರುವ ಕ್ಷೇತ್ರದ ಜನತೆ ಈ ಬಾರಿ ಚುನಾವಣೆಯಲ್ಲಿ ನಮ್ಮ ತಂದೆಯವರ ಗೆಲುವಿಗೆ ಸಹಕರಿಸುತ್ತಾರೆಂಬ ಭರವಸೆ ಇವೆÉ ಎಂದರು.
ಮುಖಂಡರಾದ ವಜ್ರೇಗೌಡ,ಹೊನ್ನನಾಯಕ,ಗಣೇಶï, ರಾಮಲಿಂಗಯ್ಯ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ