ಧರ್ಮದಲ್ಲೂ ರಾಜಕೀಯ ಬೆರೆಸುತ್ತಿರುವುದು ಸರಿಯಲ್ಲ: ಸಿದ್ದಗಂಗಾ ಮಠದ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯ

ಬೆಂಗಳೂರು,ಏ.15- ರಾಜಕೀಯ ಮತ್ತು ಧರ್ಮ ಬೇರೆ ಬೇರೆ. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮದಲ್ಲೂ ರಾಜಕೀಯ ಬೆರೆಸಲಾಗುತ್ತಿದೆ. ಇದು ಸರಿಯಲ್ಲ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.

ಚಾಮರಾಜಪೇಟೆಯ ಶಾರದಾ ಸ್ತ್ರೀ ಸಮಾಜ ಶತಮಾನೋತ್ಸವ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ ಮತ್ತು ರಾಜಕೀಯ ಎಂದಿಗೂ ಬೇರೆ ಬೇರೆ. ಆದರೆ, ಇತ್ತೀಚಿನ ಸ್ಥಿತ್ಯಂತರದಲ್ಲಿ ಧರ್ಮದಲ್ಲೂ ರಾಜಕೀಯ ಕಂಡು ಬರುತ್ತಿದೆ ಎಂದರು.

ವಚನಕಾರರ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಅನುಭವ ಮಂಟಪದಲ್ಲೂ ಮಹಿಳೆಯರ ಅಭಿಪ್ರಾಯ ಹಂಚಿಕೆಗೆ ಸಮಾನ ಅವಕಾಶವಿತ್ತು. ಇತ್ತೀಚಿನ ದಿನಗಳಲ್ಲಿ ಅಂತಹ ಸಮಾನತೆ ಕಾಣುತ್ತಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ