ಹಾಸನದಲ್ಲಿ ಯುವಕನ ಬರ್ಬರ ಕೊಲೆ!

ಹಾಸನ,ಏ.14

ಹಾಸನದಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ಹೊರ ವಲಯದ ಹೊಯ್ಸಳ ರೆಸಾರ್ಟ್‌ ಬಳಿ‌ ಈ ಘಟನೆ ನಡೆದಿದೆ.

ಹಾಸನದ ವಲ್ಲಭಾಯಿ ರಸ್ತೆಯ ಹರ್ಷ (30) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳನ್ನು ಯುವಕನ ಕೊಲೆ ಮಾಡಿ ಶವವನ್ನು ಬಾವಿಯಲ್ಲಿ ಬಿಸಾಡಿ ಹೋಗಿದ್ದಾರೆ. ಮೃತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ, ಹಣಕಾಸು ವೈಷಮ್ಯದಿಂದಲೇ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ. ಮಾರ್ಚ್ 11ರ ರಾತ್ರಿ ಸ್ನೇಹಿತನ ಮನೆಯಲ್ಲಿ ಮಲ

ಗುತ್ತೇನೆ ಎಂದು ಹೋಗಿದ್ದ ಹರ್ಷ ಮತ್ತೆ ಮನೆಗೆ ವಾಪಾಸ್ ಆಗಿರಲಿಲ್ಲ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ