ಡಿಸಿ ರೋಹಿಣಿ ವಿರುದ್ಧದ ದೂರು: ಸಚಿವ ಎ.ಮಂಜುಗೆ ಹಿನ್ನಡೆ

ಹಾಸನ,ಏ.14

ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಸಚಿವ ಎ.ಮಂಜುಗೆ ಭಾರೀ ಹಿನ್ನಡೆಯಾಗಿದೆ.

ಡಿಸಿ ರೋಹಿಣಿ ಸಿಂಧೂರಿ ವಿರುದ್ದದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಚಿವರದ್ದು ಆಧಾರರಹಿತ ಆರೋಪ ಎಂದು  ರಾಜ್ಯ ಚುನಾವಣಾ ಆಯೋಗಕ್ಕೆ ಮೈಸೂರು ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ವರದಿ ನೀಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಸಚಿವ ಎ.ಮಂಜು ವಿರುದ್ಧ ಡಿಸಿ ರೋಹಿಣಿ ಸಿಂಧೂರಿ ಎಫ್ಐಆರ್ ದಾಖಲಿಸಿದ್ದರು.

ದುರುದ್ದೇಶದಿಂದ ನನ್ನ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ, ಡಿಸಿಯನ್ನು ವರ್ಗಾವಣೆ ಮಾಡುವಂತೆ ಆಯೋಗಕ್ಕೆ ಸಚಿವರು ದೂರು ನೀಡಿದ್ದರು.

ಸಚಿವರ ದೂರು ಆಧರಿಸಿ ಮುಖ್ಯ ಚುನಾವಣಾ ಆಯುಕ್ತ ತನಿಖೆಗೆ ಆದೇಶ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ