ಸಮತಾ ಸೈನಿಕದಳದಿಂದ ಏ 14ರಂದು 127ನೇ ಅಂಬೇಡ್ಕರ್ ಜಯಂತ್ಯೋತ್ಸವ

ಬೆಂಗಳೂರು,ಏ.12-ಸಮತಾ ಸೈನಿಕದಳದ ವತಿಯಿಂದ ಇದೇ 14ರಂದು ಸದಾಶಿವನಗರದ ನಾಗಸೇನ ವಿಶ್ವವಿದ್ಯಾಲಯದ ಮೈದಾನದಲ್ಲಿ 127ನೇ ಅಂಬೇಡ್ಕರ್ ಜಯಂತ್ಯೋತ್ಸವನ್ನು ಹಮ್ಮಿಕೊಂಡಿದ್ದೇವೆ ಎಂದು ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮತಾ ಸೈನಿಕ ದಳದ ವತಿಯಿಂದ ಪ್ರತಿ ವರ್ಷ ದೀನ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಆ ಪ್ರಶಸ್ತಿಯನ್ನು ಅಂಬೇಡ್ಕರ್ ಜಯಂತಿ ದಿನದಂದು ದಲಿತ ಚಿಂತಕಿ ಎಸ್.ವಿಜಯಮ್ಮ ಅವರಿಗೆ ನೀಡುವುದಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ವೈ.ಎಸ್.ದೆವುರ್ ಆಯ್ಕೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಶಸ್ತಿ ಜೊತೆಗೆ 2500 ನಗದು ಪ್ರಶಸ್ತಿ ಪತ್ರ ಹಾಗೂ ಅಂಬೇಡ್ಕರ್ ಅವರ ಮೂರ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.
ಅªಂಬೇಡ್ಕರ್ ಸ್ಥಾಪಿಸಿದ ಸಮತಾ ಸೈನಿಕ ದಳ ಮತ್ತು ಪೀಪಲ್ ಎಜುಕೇಷನಲ್ ಸೊಸೈಟಿ ಜಂಟಿ ಆಶ್ರಯದಲ್ಲಿ ಈಕಾರ್ಯಕ್ರಮ ನಡೆಯವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ