ವೃದ್ಧೆಯ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತು ಪರಾರಿ:

ಚನ್ನಪಟ್ಟಣ, ಏ.12- ರೈಲಿನಿಂದ ಇಳಿದು ಮನೆ ಕಡೆ ಹೊರಟಿದ್ದ ವೃದ್ಧೆಯ ಮೇಲೆ ಹಿಂಬದಿಯಿಂದ ದಾಳಿ ಮಾಡಿದ ಕಳ್ಳ ಹಲ್ಲೆ ನಡೆಸಿ ಆಕೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ಆರ್‍ಕೆ ಗೇಟ್ ಬಳಿ ನಡೆದಿದೆ.
ಮಾಂಗಲ್ಯಸರ ಕಳೆದುಕೊಂಡ ವೃದ್ಧೆ ಇಂದ್ರಾವತಿ (63) ಎಂದು ಹೇಳಲಾಗಿದ್ದು, ನಗರದ ಲಾಯದ ಬೀದಿಯ ನಿವಾಸಿ ರಾಮಚಂದ್ರ ಎಂಬುವವರ ಪತ್ನಿಯಾದ ಇವರು ಕಳೆದ ರಾತ್ರಿ 7ರ ಸಮಯದಲ್ಲಿ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಬಂದು ಇಳಿದು ಹೋಗುವಾಗ ಈ ಕೃತ್ಯ ಎಸಗಲಾಗಿದೆ.
ಬೆಂಗಳೂರಿನಲ್ಲಿ ವಾಟರ್ ಸಪ್ಲೈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಎಂದಿನಂತೆ ರೈಲು ಪ್ರಯಾಣ ಮಾಡಿ ನಗರದಲ್ಲಿ ಇಳಿದು ಹೋಗುವಾಗ ಆರ್‍ಕೆ ಗೇಟ್ ಬಳಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದು ಆಕೆಯ ತಲೆಗೆ ಹೊಡೆದಿದ್ದಾನೆ.
ಏಕಾಏಕಿ ನಡೆದ ಘಟನೆಯಿಂದ ಆತಂಕ, ಭಯದಿಂದ ಕೆಳಗೆ ಬಿದ್ದ ಆಕೆಯ ಮೇಲೆ ಹಲ್ಲೆ ನಡೆಸಿ ಆಕೆಯ ಕೊರಳಲ್ಲಿದ್ದ 60 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರ ಅಪಹರಿಸಿ ಕತ್ತಲೆಯಲ್ಲಿ ಮರೆಯಾಗಿದ್ದಾನೆ. ಈ ಪ್ರಕರಣದ ಬಗ್ಗೆ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ,ಕಳ್ಳನ ಪತ್ತೆಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ