ಮೊಬೈಲ್‍ಗೆ ಕರೆ ಬಂದ ಹಿನ್ನೆಲೆಯಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಯುವಕ ತೆರಳಿದಾಗ ಗುಂಪೆÇಂದು ಏಕಾಏಕಿ ಲಾಂಗ್, ಮಚ್ಚುಗಳಿಂದ ಹಲ್ಲೆ

ಬೆಂಗಳೂರು,ಏ.12- ಮೊಬೈಲ್‍ಗೆ ಕರೆ ಬಂದ ಹಿನ್ನೆಲೆಯಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಯುವಕ ತೆರಳಿದಾಗ ಗುಂಪೆÇಂದು ಏಕಾಏಕಿ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿ ಯುವಕನ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೆಂಗೇರಿಯ ನಿವಾಸಿ ಕೋಟೇಶ್ವರ (21) ಕೊಲೆಯಾದ ದುರ್ದೈವಿ.
ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಯುವಕರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದು , ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇಂದು ಬೆಳಗ್ಗೆ ಕೋಟೇಶ್ವರನಿಗೆ ಸ್ನೇಹಿತರೇ ಮೊಬೈಲ್‍ಗೆ ಕರೆ ಮಾಡಿ ಕಾಮಾಕ್ಷಿಪಾಳ್ಯ ವ್ಯಾಪ್ತಿಯ ತೋಟದ ಮನೆ ರಸ್ತೆ, ಸಣ್ಣಕ್ಕಿ ಬಯಲು ಬಳಿ ಬರಲು ಹೇಳಿದ್ದಾರೆ.
ಕೋಟೇಶ್ವರ ಇಂದು ಬೆಳಗ್ಗೆ 8.30ರ ಸಮಯದಲ್ಲಿ ತನ್ನ ಮೂವರು ಸ್ನೇಹಿತರ ಜೊತೆ ಸಣ್ಣಕ್ಕಿ ಬಯಲು ಬಳಿ ಹೋಗುತ್ತಿದ್ದಂತೆ, ಏಳೆಂಟು ಮಂದಿಯ ಗುಂಪು ಏಕಾಏಕಿ ಮಚ್ಚು, ಲಾಂಗು, ರಾಡುಗಳಿಂದ ಮನ ಬಂದಂತೆ ಈ ನಾಲ್ವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತೀವ್ರ ಹಲ್ಲೆಯಿಂದ ಕೋಟೇಶ್ವರ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ಈತನ ಜೊತೆಯಲ್ಲಿ ಬಂದಿದ್ದ ಮೂವರು ಗಾಯಗೊಂಡಿದ್ದಾರೆ.

ಸುದ್ದಿ ತಿಳಿದ ಕಾಮಾಕ್ಷಿ ಪಾಳ್ಯ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಹಣ ಹಾಗೂ ಹುಡುಗಿ ವಿಚಾರವಾಗಿ ಕೊಲೆ , ಕೊಲೆ ಯತ್ನ ನಡೆದಿರಬಹುದೆಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಆರೋಪಿಗಳಿಗೂ ಹಾಗೂ ಇವರ ಮಧ್ಯೆ ಮೆಜೆಸ್ಟಿಕ್‍ನಲ್ಲಿ ಜಗಳ ನಡೆದಿತ್ತು ಎನ್ನಲಾಗಿದ್ದು , ಅದೇ ವಿಚಾರವಾಗಿ ಇಂದು ಬೆಳಗ್ಗೆ ಮಾತನಾಡಬೇಕೆಂದು ಕರೆಸಿಕೊಂಡು ಕೊಲೆ, ಕೊಲೆ ಯತ್ನ ನಡೆಸಿ ಆರೋಪಿಗಳು ಪರಾರಿಯಾಗಿದ್ದು, ಅವರುಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಕಾಮಾಕ್ಷಿಪಾಳ್ಯ ಠಾಣೆ ಪೆÇಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ