ಚುನಾವಣಾ ಭದ್ರತೆಗಾಗಿ ಸ್ಥಳೀಯ ಪೆÇಲೀಸರ ಜೊತೆಗೆ ಕೇಂದ್ರದ ಪಡೆ ನಿಯೋಜನೆ

ಬೆಂಗಳೂರು, ಏ.9-ಚುನಾವಣಾ ಭದ್ರತೆಗಾಗಿ ನಗರದಲ್ಲಿ ಸ್ಥಳೀಯ ಪೆÇಲೀಸರ ಜೊತೆಗೆ ಕೇಂದ್ರದ ಪಡೆಗಳನ್ನು ಸಹ ನಿಯೋಜಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡುತ್ತಿದ್ದ ಅವರು, ಇದುವರೆಗೂ ಆರು ಕಂಪೆನಿ ಕೇಂದ್ರದ ಪಡೆಗಳು ನಗರಕ್ಕೆ ಬಂದಿವೆ. ಅವುಗಳನ್ನು ಕೆಲವು ವಿಭಾಗಗಳಿಗೆ ನಿಯೋಜಿಸಲಾಗಿದೆ. ಇಂದು ಅಥವಾ ನಾಳೆ ಇನ್ನು ಏಳು ಕಂಪೆನಿಯ ಅರೆಸೇನಾ ಪಡೆಗಳು ನಗರಕ್ಕೆ ಬರಲಿವೆ ಎಂದು ಹೇಳಿದರು.

ಉತ್ತರ ವಿಭಾಗದ ಕೆಲವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಕೇಂದ್ರದ ಪಡೆಗಳಿಂದ ಪಥಸಂಚಲನ ನಡೆಸಲಾಯಿತು.
ನಗರಕ್ಕೆ ಆಗಮಿಸಿರುವ ಕೇಂದ್ರ ಪಡೆಗಳಲ್ಲಿ ಆರ್‍ಎಎಫ್, ಐಟಿಬಿಟಿ, ಸಿಐಎಸ್‍ಎಫ್ ಸೇರಿದಂತೆ ಇನ್ನಿತರ ಕಂಪೆನಿಗಳು ಸೇರಿವೆ. ನಗರದಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ