ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಸಂಸದರ ರಾಜೀನಾಮೆ:

ನವದೆಹಲಿ, ಏ.6-ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಐವರು ಸಂಸದರು ಇಂದು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿ.ವರಪ್ರಸಾದ್ ರಾವ್, ವೈ.ವಿ.ಸುಬ್ಬಾರೆಡ್ಡಿ , ಪಿ.ವಿ.ಮಿಥುನ್ ರೆಡ್ಡಿ ,ವೈ.ಎಸ್.ಅವಿನಾಶ್ ರೆಡ್ಡಿ ಹಾಗೂ ಪಕ್ಷದ ಸದನದ ನಾಯಕ ಮೇಕಪಟ್ಟಿ ರಾಮಮೋಹನ ರೆಡ್ಡಿ ಅವರುಗಳು ರಾಜೀನಾಮೆಸಲ್ಲಿಸಿದ್ದಾರೆ. ಇಂದು ಲೋಕಸಭೆ ಅಧ್ಯಕ್ಷ ಸುಮಿತ್ರ ಮಹಾಜನ್ ಅವರನ್ನು ಭೇಟಿ ಮಾಡಿರುವ ಈ ಐವರು ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ