ಏ.8ರಂದು 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿ

ಬೆಂಗಳೂರು,ಏ.6- ಭಾರತ ಗ್ರಾಹಕರ ಒಕ್ಕೂಟ ವತಿಯಿಂದ 26ನೇ ರಾಷ್ಟ್ರೀಯ ಸಮುದಾಯ ಮತ್ತು ರಾಷ್ಟ್ರೀಯ ಗ್ರಾಹಕರ ವಿಚಾರ ಗೋಷ್ಠಿಯನ್ನು ಇದೇ 8ರಂದು ಬೆಳಗ್ಗೆ 10 ಗಂಟೆಗೆ ಶೆಟ್ಟಿಹಳ್ಳಿಯ ಕಥರಂಗಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪೆÇ್ರ.ಹೊನಕಲ್ ನಾರಾಯಣ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಬರಹಗಾರ ಮತ್ತು ಸಮಾಜ ಸೇವಕ ಮಂಜುನಾಥ್ ನಾಯಕ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇರಳ ಸಮಾಜದ ಅಧ್ಯಕ್ಷ ಟಿ.ಕೆ.ಗೋಪಾಲಕೃಷ್ಣ ಭಾಗವಹಿಸಲಿದ್ದಾರೆ ಹಾಗೂ ಗ್ರಾಹಕ ರಕ್ಷಣೆ ಕಾಯ್ದೆ, ಗ್ರಾಹಕ ರಕ್ಷಣೆ ತಿದ್ದುಪಡಿಗಳ ಬಗ್ಗೆ ಕುರಿತು ರಾಷ್ಟ್ರೀಯ ಕಾರ್ಯಕರ್ತ ಜಾರ್ಜ್ ಥಾಮಸ್, ತಮಿಳುನಾಡಿನ ರಾಷ್ಟ್ರೀಯ ಕಾರ್ಯಕರ್ತ ಡಾ.ಕೆ.ಮಹೀಂದ್ರನ್ ವಿಷಯ ಚರ್ಚೆ ಮಾಡಲಿದ್ದಾರೆ ಎಂದರು.

ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ಪತ್ರಿಕೆ ವಿಚಾರ ವರದಿಯ ಬಗ್ಗೆ ವಕೀಲರಾದ ಪಿ.ಅಂಥೋಣಿ ವಿಚಾರಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ