ಬೆಂಗಳೂರು,ಏ.4-ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದ ಬೈಕ್ ಸವಾರರು ಕಾರಿನಲ್ಲಿದ್ದವರೊಂದಿಗೆ ಜಗಳವಾಡಿ 5ಸಾವಿರ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಬ್ಯಾಟರಾಯನಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ರಸ್ತೆಯ ಆರ್.ಆರ್.ಗೇಟ್ ಸಮೀಪ ರಾತ್ರಿ 12 ಗಂಟೆ ಸಂದರ್ಭದಲ್ಲಿ ನವಾಜ್ಅಹಮ್ಮದ್ ಹಾಗೂ ಇತರರು ಕಾರಿನಲ್ಲಿ ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಬೈಕ್ನಲ್ಲಿ ಕಾರನ್ನು ಓವರ್ ಟೇಕ್ ಮಾಡಿಕೊಂಡು ಬಂದ ಇಬ್ಬರು ಸವಾರರು ಕಾರಿಗೆ ಅಡ್ಡ ಹಾಕಿ ಕಾರಿನಲ್ಲಿದ್ದವರೊಂದಿಗೆ ಜಗಳವಾಡಿ ಹಣ ಹಾಗೂ ಮೊಬೈಲ್ನ್ನು ಕಸಿದು ಪರಾರಿಯಾಗಿದ್ದಾರೆ.
ಈ ಸಂಬಂಧ ನವಾಜ್ ಅವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.