ವಕೀಲ ಕೆ.ಎಸ್.ಮಂಜುನಾಥ್ ಮೇಲೆ ಬಂಕ್ ಮಾಲೀಕ ವೆಂಕಟೇಗೌಡ ಹಾಗೂ ಸಿಬ್ಬಂದಿ ಸೇರಿ ಹಲ್ಲೆ :

ಹೊಸಕೋಟೆ, ಏ.3- ತಾಲ್ಲೂಕಿನ ನಂದಗುಡಿ ಬಳಿ ಭೀಮಕ್ಕನಹಳ್ಳಿ ಪೆಟ್ರೋಲ್ ಬಂಕ್‍ನಲ್ಲಿ ಕೊಟ್ಟ ಹಣಕ್ಕೆ ಸರಿಯಾಗಿ ಪೆಟ್ರೋಲ್ ನೀಡುತ್ತಿಲ್ಲ ಎಂದು ಪ್ರಶ್ನಿಸಲು ಹೋದ ವಕೀಲ ಕೆ.ಎಸ್.ಮಂಜುನಾಥ್ ಮೇಲೆ ಬಂಕ್ ಮಾಲೀಕ ವೆಂಕಟೇಗೌಡ ಹಾಗೂ ಸಿಬ್ಬಂದಿ ಸೇರಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಸಂಬಂಧ ಸ್ಥಳೀಯ ನಂದಗುಡಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ ವಕೀಲ ಮಂಜುನಾಥ್‍ರಿಂದ ದೂರು ಪಡೆದು ನಾಳೆ ಬರುವಂತೆ ಅಲ್ಲಿಯ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ನಾಳೆ ಬಂದು ಸಾಹೇಬರ ಬಳಿ ಮಾತನಾಡು ಎಂದು ವಕೀಲರನ್ನು ಠಾಣೆಯಿಂದ ಹೊರ ಕಳುಹಿಸಿದ್ದಾರೆ.
ಈ ಘಟನೆಯನ್ನು ಪ್ರಶ್ನಿಸಿ ಹೊಸಕೋಟೆ ವಕೀಲರು ಕೋರ್ಟ್ ಕಾರ್ಯಕಲಾಪವನ್ನು ನಿಲ್ಲಿಸಿ ನಗರದ ಕೋರ್ಟ್ ಆವರಣದಿಂದ ಡಿವೈಎಸ್‍ಪಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಈ ಬಗ್ಗೆ ನಂದಗುಡಿ ಪೆÇಲೀಸರ ವಿರುದ್ದ ಹಾಗೂ ಪೆಟ್ರೋಲ್ ಬಂಕ್ ಮಾಲೀಕ ಹಾಗೂ ಸಿಬ್ಬಂದಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯ ಒದಗಿಸುವುದರ ಜೊತೆ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹೊಸಕೋಟೆ ವಕೀಲರು ಡಿವೈಎಸ್‍ಪಿ ಎನ್.ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ