ಮೇ 5ರಂದು ಉಜ್ವಲ ಉದ್ಯಮಿ ಪ್ರಶಸ್ತಿ ಕಾರ್ಯಕ್ರಮ

ಬೆಂಗಳೂರು, ಏ.2- ಸೂಕ್ಷ್ಮ ಮತ್ತು ಸಣ್ಣ ಉದ್ಯಮಿಗಳ ಕೈಗಾರಿಕಾ ಸಂಘ (ಕಾಸಿಯಾ)ದ ವತಿಯಿಂದ ಉಜ್ವಲ ಉದ್ಯಮಿ ಪ್ರಶಸ್ತಿ ಕಾರ್ಯಕ್ರಮವನ್ನು ಮೇ 5ರಂದು ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಸಂಘದ ಅಧ್ಯಕ್ಷ ಆರ್.ಹನುಮಂತೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಮಟ್ಟದ ಉತ್ಪನ್ನಗಳು ಮತ್ತು ಸೇವೆಗಳ ಅಭಿವೃದ್ಧಿಯಲ್ಲಿ ಇತ್ತೀಚಿನ ತಂತ್ರಜ್ಞಾನ, ಉತ್ಪಾದನಾ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಅಳವಡಿಸಿಕೊಂಡು ಉದ್ಯಮಿಗಳಿಗೆ ಈ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗುರುತಿಸಲಾಗುವುದು ಎಂದರು.

ಆಗ್ರೋ ಫುಡ್ ಪೆÇ್ರಸೆಸಿಂಗ್, ಹ್ಯಾಂಡ್ರಿಕ್ರಾಫ್ಟ್ ,ಎಂಜಿನಿಯರಿಂಗ್ ಫ್ಯಾಬ್ರಿಕೇಷನ್, ಟೂಲ್ ಮತ್ತು ಡೈ ಮೇಕಿಂಗ್, ಒಇಎಂ ಉತ್ಪಾದಕರು, ಆಟೋ ಕಾಂಪೆÇನೆಂಟ್ಸ್, ಏರೋಸ್ಪೇಸ್, ಡಿಫೆನ್ಸ್ ಮತ್ತು ಸ್ಪೇಸ್ ಕಾಂಪೆÇನೆಂಟ್ಸ್ ಸೇರಿದಂತೆ ಒಟ್ಟು 16 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು ಎಂದರು.
ಪ್ರಶಸ್ತಿ ವಿಜೇತರನ್ನು ಮಯ್ಯಾಸ್ ಬಿವರೇಜಸ್ ಅಂಡ್ ಫುಡ್ ಪ್ರಾಡಕ್ಟ್ಸ್ ಅಧ್ಯಕ್ಷ ಸದಾನಂದ ಮಯ್ಯ ಅವರು ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.
ಆಸಕ್ತ ಉದ್ಯಮಿಗಳು ಏ.25ರೊಳಗೆ ಕಾಸಿಯಾ ಕಚೇರಿಯಲ್ಲಿ ಲಭ್ಯವಿರುವ ಪ್ರವೇಶ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಡಿಡಿಡಿ.hZooಜಿZ.್ಚಟಞ ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ