ರೈಲಿನಲ್ಲಿ ದರೋಡೆಕೋರರು, ಚಿನ್ನಾಭರಣ ಲೂಟಿಮಾಡಿ ಪರಾರಿ:

ನವದೆಹಲಿ, ಮಾ.30- ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರು ಅಂಬಾಲಾಗೆ ತೆರಳುತ್ತಿದ್ದ ರೈಲಿನ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನಾಭರಣ ಮತ್ತು ಮೊಬೈಲ್ ಫೆÇೀನ್‍ಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಇಂದು ಮುಂಜಾನೆ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದ ಬಳಿ ನಡೆದಿದೆ.
ದರೋಡೆಕೋರರ ಈ ಕೃತ್ಯದಲ್ಲಿ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ನಿಜಾಮುದ್ದೀನ್-ಅಂಬಾಲಾ ಪ್ರಯಾಣಿಕರ ರೈಲಿನಲ್ಲಿ ಈ ಘಟನೆ ನಡೆದಿದೆ.
ಮುಂಜಾನೆ 3.56ರಲ್ಲಿ ರೈಲು ನಿಜಾಮುದ್ದೀನ್ ನಿಲ್ಧಾಣದಿಂದ ಹೊರಟಿತ್ತು. ನಿಲ್ದಾಣ ಮತ್ತು ತಿಲಕ್ ಸೇತುವೆ ಮಧ್ಯೆ ಇರುವ ಪ್ರದೇಶದಲ್ಲಿ ರೈಲು ನಿಲುಗಡೆಯಾಗಿದ್ದಾಗ ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರು ಸಾಮಾನ್ಯ ಬೋಗಿಯೊಳಗೆ ನುಗ್ಗಿದರು. ಅದರಲ್ಲಿದ್ದ 15 ಪ್ರಯಾಣಿಕರನ್ನು ಬೆದರಿಸಿ ನಗ-ನಾಣ್ಯ ದರೋಡೆ ಮಾಡಿ ಪರಾರಿಯಾದರು ಎಂದು ಉತ್ತರ ರೈಲ್ವೆ ವಿಭಾಗದ ವಕ್ತಾರ ನಿತಿನ್ ಚೌಧರಿ ಹೇಳಿದ್ದಾರೆ. ಈ ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ದರೋಡೆಯಾದ ವಸ್ತುಗಳ ಮೌಲ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ